News Kannada
Monday, October 02 2023
ಮಂಗಳೂರು

ಬೆಳ್ತಂಗಡಿ: ಪಾಶ್ಚಾತ್ಯ ಅನುಕರಣೆಗಳು ನಮ್ಮನ್ನು ನಮ್ಮ‌ ಪರಂಪರೆಯಿಂದ ವಿಮುಖರನ್ನಾಗಿಸುತ್ತಿವೆ

Belthangady: Western imitations are alienating us from our heritage
Photo Credit : By Author

ಬೆಳ್ತಂಗಡಿ: ಪಾಶ್ಚಾತ್ಯ ಅನುಕರಣೆಗಳು ನಮ್ಮನ್ನು ನಮ್ಮ‌ ಪರಂಪರೆಯಿಂದ ವಿಮುಖರನ್ನಾಗಿಸುತ್ತಿವೆ. ಮನೆಯ ಹಿರಿಯರು ಇದನ್ನು ತಡೆಗಟ್ಟಬೇಕು ಎಂದು ರಾಷ್ಟ್ರಸೇವಿಕಾ ಸಮಿತಿ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಕುಮುದಿನಿ ಹೇಳಿದರು.

ಅವರು, ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ರಾಷ್ಟ್ರಸೇವಿಕಾ ಸಮಿತಿಯ ಮಂಗಳೂರು ವಿಭಾಗದ ಪುತ್ತೂರು ಜಿಲ್ಲಾ ಪ್ರಾರಂಭಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಹೆಣ್ಣು ಮಕ್ಕಳಿಗೆ ಸಂಸ್ಕಾರ ನೀಡುವ, ವ್ಯಕ್ತಿತ್ವ ನಿರ್ಮಾಣದ ಕಾರ್ಯ ಸಮಿತಿಯು ಮಾಡುತ್ತಿದೆ. ಕೇಂದ್ರದಲ್ಲಿ ಸಂಘದ ಶಿಕ್ಷಣ ಪಡೆದ ಸ್ವಯಂಸೇವಕರು ದೇಶವನ್ನು ಮುನ್ನಡೆಸುತ್ತಿದ್ದಾರೆ. ಇದೊಂದು ಸಾಧನೆಯೇ ಆದರೂ ಅದರಿಂದ ಸಂತುಷ್ಟರಾಗುವ ಹಾಗಿಲ್ಲ. ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಅಖಂಡ ಭಾರತ ಸಾಕಾರದತ್ತ ಹೆಜ್ಜೆಯಿಡಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿಯ ವಕ್ರದಂತ ತಜ್ಞೆ ಡಾ. ಆಶಾ ಪಿದಮಲೆ ಅವರು, ಇಂದು ಹೆಣ್ಣು ಮಕ್ಕಳು ಗುರಿ ಸಾಧಿಸಲು ಸಾಕಷ್ಟು ಅನುಕೂಲತೆಗಳಿವೆ. ಗುರಿ ಸಾಧಿಸುವ ಛಲ ನಮ್ಮಲ್ಲಿ ಬರಬೇಕು. ಇನ್ನೊಬ್ಬರಿಗೆ ಸಹಾಯ ಮಾಡುವಷ್ಟು ನಾವು ಶಕ್ತಿವಂತರಾಗಬೇಕು ಎಂದರು.

ಸಮಿತಿ ಪುತ್ತೂರು ಜಿಲ್ಲಾ ಸಂಪರ್ಕ‌ ಪ್ರಮುಖ್ ಸುಗುಣ ರಾವ್ ಶಿಬಿರಾಧಿಕಾರಿಯಾಗಿದ್ದರು. ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಕಮಲಾ ಭಟ್ ಇದ್ದರು. ಜಿಲ್ಲಾ ಬೌದ್ಧಿಕ್ ಪ್ರಮುಖ್ ವೇದಾವತಿ ಸ್ವಾಗತಿಸಿದರು. ತಾಲೂಕು ಕಾರ್ಯವಾಹಿಕೆ ಮಂಗಳಾ ರತ್ನಾಕರ್ ವಂದಿಸಿದರು. ಶಿಬಿರದಲ್ಲಿ 62 ಹೆಣ್ಣು ಮಕ್ಕಳು ಭಾಗವಹಿಸಿದ್ದರು.

See also  ಸ್ಪಿಯರ್‌ಹೆಡ್ ಮೀಡಿಯಾ: ಧನಾತ್ಮಕ ಸ್ಥಳೀಯ ಮಾಧ್ಯಮಕ್ಕಾಗಿ ಫ್ರ್ಯಾಂಚೈಸಿ ಅವಕಾಶ ಪ್ರಾರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು