News Kannada
Tuesday, September 26 2023
ಮಂಗಳೂರು

ಮಂಗಳೂರು: 8 ವರ್ಷದ ಬಳಿಕ ಪಿಲಿಕುಳ ಕಂಬಳ ಆರಂಭ

Mangaluru: After 8 years, Pilikula Kambala
Photo Credit : News Kannada

ಮಂಗಳೂರು: ‘ಕಂಬಳ’ ಸೀಸನ್‌ ನ.5ರಿಂದ ಆರಂಭಗೊಂಡು ಏ.8ರವರೆಗೆ ವೀಕೆಂಡ್‌ಗಳಲ್ಲಿ ನಡೆಯಲಿದೆ. ಸುಮಾರು 8 ವರ್ಷ ಬಳಿಕ ಏಕೈಕ ಸರಕಾರಿ ಕಂಬಳ ಪಿಲಿಕುಳದಲ್ಲಿ ನಡೆಯಲಿದೆ. ಪಿಲಿಕುಳದಲ್ಲಿ 2014ರಲ್ಲಿ ಕೊನೆಯದಾಗಿ ನೇತ್ರಾವತಿ-ಫಲ್ಗುಣಿ ಜೋಡುಕರೆ ಕಂಬಳ ನಡೆದಿತ್ತು. ಬಳಿಕ ಕಂಬಳದ ವಿರುದ್ಧ ಕೋರ್ಟ್‌ನಲ್ಲಿ ದಾವೆ ಹೂಡಿದ್ದರಿಂದ ಕಂಬಳ ಆಯೋಜನೆಯಿಂದ ಜಿಲ್ಲಾಡಳಿತ ಹಿಂದೆ ಸರಿದಿತ್ತು. 2018ರಲ್ಲಿ ಸಸಿಕಾಂತ್‌ ಸೆಂಥಿಲ್‌ ಜಿಲ್ಲಾಧಿಕಾರಿಯಾಗಿದ್ದಾಗ, 2019ರಲ್ಲಿ ಸಿಂಧೂ ಬಿ. ರೂಪೇಶ್‌ ಜಿಲ್ಲಾಧಿಕಾರಿಯಾಗಿದ್ದಾಗ ಕಂಬಳ ನಡೆಸುವ ಚಿಂತನೆ ನಡೆಸಿದ್ದರಾದರೂ ಕೊನೇ ಕ್ಷಣದಲ್ಲಿ ಆ ಯೋಜನೆ ಕೈಬಿಟ್ಟಿದ್ದರು.

ಹಲವು ವರ್ಷಗಳಿಂದ ನಿಂತು ಹೋಗಿದ್ದ ಪಿಲಿಕುಳ ಕಂಬಳವನ್ನು ನಡೆಸಲು ಸ್ವತಃ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಉತ್ಸುಕರಾಗಿದ್ದು, ತಕ್ಷಣ ಪೂರ್ವ ತಯಾರಿ ನಡೆಸುವಂತೆ ಕಂಬಳ ಸಮಿತಿ ಹಾಗೂ ಅಧಿಕಾರಿಗಳಿಗೆ ಸೂಚನೆ ನಡೆಸಿದ್ದಾರೆ.

2020, 2021ರಲ್ಲಿ ರಾಜ್ಯದಲ್ಲಿ ಕೋವಿಡ್‌ ನಿರ್ಬಂಧವಿದ್ದ ಕಾರಣ ಕಂಬಳ ಆಯೋಜನೆಗೆ ಜಿಲ್ಲಾಡಳಿತ ಮುಂದಾಗಲಿಲ್ಲ. ಆದರೆ ಈ ಬಾರಿ ಕರಾವಳಿಯ ಪ್ರವಾಸೋದ್ಯಮಕ್ಕೆ ವಿಶೇಷ ಚೈತನ್ಯ ನೀಡುವ ಉದ್ದೇಶದಿಂದ ಜಿಲ್ಲಾಧಿಕಾರಿಗಳೇ ಪಿಲಿಕುಳ ಕಂಬಳ ನಡೆಸುವ ಬಗ್ಗೆ ಉತ್ಸುಕರಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಸುಮಾರು 8 ವರ್ಷ ಪಿಲಿಕುಳದಲ್ಲಿ ಕಂಬಳ ನಡೆಯದ ಕಾರಣ ಕರೆಯ ಸುತ್ತಮುತ್ತ ಬೃಹತ್‌ ಗಾತ್ರದ ಮರಗಳು ಬೆಳೆದು ನಿಂತಿವೆ. ಇದನ್ನು ತೆರವು ಮಾಡಿ ಸಮರ್ಪಕವಾಗಿ ಕರೆಗಳನ್ನು ರಚಿಸುವುದು ದೊಡ್ಡ ಸವಾಲಾಗಿದೆ. ಒಂದು ವೇಳೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿದರೆ ಕಂಬಳ ಸಮಿತಿ ಬೆಂಬಲ ನೀಡಿ, ಕರೆ ನಿರ್ಮಾಣ ಮಾಡಲಾಗುವುದು ಎನ್ನುತ್ತಾರೆ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್‌ ರೋಹಿತ್‌ ಹೆಗ್ಡೆ.

ಕಂಬಳ ಅಧಿಕೃತ ವೇಳಾಪಟ್ಟಿ
ನ.5 ಶಿರ್ವ: ಸೂರ್ಯ-ಚಂದ್ರ ಕಂಬಳ
ನ.12 ಪಿಲಿಕುಳ: ಫಲ್ಗುಣಿ-ನೇತ್ರಾವತಿ ಕಂಬಳ
ನ.19 ಪಜೀರು: ಲವ-ಕುಶ ಜೋಡುಕರೆ ಕಂಬಳ
ನ.26 ಕಕ್ಯಪದವು: ಸತ್ಯ-ಧರ್ಮ ಜೋಡುಕರೆ ಕಂಬಳ
ಡಿ.3 ವೇಣೂರು-ಪೆರ್ಮುಡ: ಸೂರ್ಯ-ಚಂದ್ರ ಜೋಡುಕರೆ
ಡಿ.10 ಬಾರಾಡಿಬೀಡು: ಸೂರ್ಯ-ಚಂದ್ರ ಜೋಡುಕರೆ ಕಂಬಳ
ಡಿ.17 ಹೊಕ್ಕಾಡಿಗೋಳಿ: ವೀರ-ವಿಕ್ರಮ ಜೋಡುಕರೆ
ಡಿ.18 ಬಳ್ಳಮಂಜ: ಶೇಷ-ನಾಗ ಜೋಡುಕರೆ ಕಂಬಳ
ಡಿ.24 ಮೂಡುಬಿದಿರೆ: ಕೋಟಿ-ಚೆನ್ನಯ ಜೋಡುಕರೆ
ಡಿ.31 ಮೂಲ್ಕಿ ಅರಸು: ಪಡು-ಪಣಂಬೂರು ಅರಸು ಕಂಬಳ
ಜ.7 ಮಿಯ್ಯಾರು: ಲವ-ಕುಶ ಜೋಡುಕರೆ ಕಂಬಳ
ಜ.15 ಅಡ್ವೆ ನಂದಿಕೂರು: ಕೋಟಿ-ಚೆನ್ನಯ ಜೋಡುಕರೆ ಕಂಬಳ
ಜ.22 ಬಂಗ್ರಕುಳೂರು: ರಾಮ-ಲಕ್ಷ್ಮಣ ಕಂಬಳ
ಜ.28 ಐಕಳಬಾವ: ಕಾಂತಾಬಾರೆ-ಬೂದಾಬಾರೆ ಕಂಬಳ
ಫೆ.4 ಪುತ್ತೂರು: ಕೋಟಿ-ಚೆನ್ನಯ ಜೋಡುಕರೆ
ಫೆ.11 ವಾಮಂಜೂರು: ಸಂಕು ಪೂಂಜ-ದೇವು ಪೂಂಜ ಜೋಡುಕರೆ ಕಂಬಳ
ಫೆ.18 ಕಟಪಾಡಿ: ಮೂಡ-ಪಡು ಕಂಬಳ
ಫೆ.25 ಜಪ್ಪು: ಜಯ-ವಿಜಯ ಜೋಡುಕರೆ ಕಂಬಳ
ಮಾ.4 ನಾವೂರು: ಮೂಡೂರು-ಪಡೂರು ಕಂಬಳ
ಮಾ.11 ಉಪ್ಪಿನಂಗಡಿ: ವಿಜಯ-ವಿಕ್ರಮ ಜೋಡುಕರೆ
ಮಾ.18 ಬಂಗಾಡಿ: ಸೂರ್ಯ-ಚಂದ್ರ ಜೋಡುಕರೆ
ಮಾ.25 ಪೈವಳಿಕೆ: ಅಣ್ಣ-ತಮ್ಮ ಜೋಡುಕರೆ ಕಂಬಳ
ಏ.1 ಸುರತ್ಕಲ್‌: ರಾಮಲಕ್ಷ್ಮಣ ಜೋಡುಕರೆ ಕಂಬಳ
ಏ.8 ಪಣಪಿಲ: ಜಯ-ವಿಜಯ ಜೋಡುಕರೆ ಕಂಬಳ
(ಕೊನೇ ಕ್ಷಣದ ಬದಲಾವಣೆ ಹೊರತುಪಡಿಸಿ)

See also  ರಾಯಚೂರು: ಕಮಿಷನ್ ದಂಧೆ ಆರೋಪ ಮಾಡುವವರು ದಾಖಲೆ ಒದಗಿಸಲಿ ಎಂದ ಬಿ.ಸಿ.ಪಾಟೀಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು