ಮಂಗಳೂರು: ಕರಾವಳಿಯ ಮುಂಚೂಣಿಯ ಸಹಕಾರಿ ಲಿಮಿಟೆಡ್ ಬ್ಯಾಂಕುಗಳಲ್ಲಿ ಒಂದಾಗಿರುವ ಎಂಸಿಸಿ ಬ್ಯಾಂಕ್ ನವಂಬರ್ 27 2022 ರಂದು ರವಿವಾರ ನಗರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ಶತಮಾನುತ್ತರ ದಶಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಎಂಸಿಸಿ ಬ್ಯಾಂಕ್ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಹದಿನಾರು ಶಾಖೆಗಳನ್ನು ಹೊಂದಿದೆ ಕಳೆದ ಮಾರ್ಚ್ 2, 2022 ರಂದು ದಾಖಲೆಯ ಲಾಭವನ್ನು ದಾಖಲಿಸಿದೆ ಎಂದರು
ಈ ಸಮಾರಂಭಕ್ಕೆ ಮಂಗಳೂರು ಮತ್ತು ಉಡುಪಿ ಉಭಯ ಧರ್ಮ ಪ್ರಾಂತ್ಯಗಳ ಧರ್ಮಧ್ಯಕ್ಷರುಗಳಾದ ಡಾ. ಡಾಕ್ಟರ್ ಪೀಟರ್ ಪಾವ್ ಸಲ್ದಾನ ಮತ್ತು ಡಾಕ್ಟರ್ ಜೆರಾಲ್ಡ್ ಇಜಾಕ್ ಲೋಬೊ ,ಶಾಸಕ ವೇದವ್ಯಾಸ್ ಕಾಮತ್ ಆನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೋ ಉಪಸ್ಥಿತರಿರುವರು . ಸಮಾರಂಭವು ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬರ್ ಅವರ ಅದ್ಯಕ್ಷತೆಯಲ್ಲಿ ಇರುವುದು. ಕಾರ್ಯಕ್ರಮ ನವೆಂಬರ್ 27ರ ಸಂಜೆ 5:30ಕ್ಕೆ ಆರಂಭಗೊಂಡು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಹ ಭೋಜನದೊಂದಿಗೆ ಸಮಾಪ್ತವಾಗುವುದು.
ಈ ಉತ್ಸವದ ಸಂದರ್ಭದಲ್ಲಿ ಸಮಾಜದ ಆಸಕ್ತ ವರ್ಗದವರ ಚಿಕಿತ್ಸೆಗೆ ಉನ್ನತ ಶಿಕ್ಷಣಕ್ಕೆ ವಸತಿ ಮತ್ತು ಹೆಣ್ಣು ಮಕ್ಕಳ ಮದುವೆಯ ವೆಚ್ಚಕ್ಕೆ ಸಹಾಯಸ್ತ ನೀಡಲಾಗುವುದು .ಆಸಕ್ತರಿಗೆ ನೀಡುವ ಧೇನಿಗೆ ಕಾರ್ಯಕ್ರಮವು ಶನಿವಾರ ನವೆಂಬರ್ 26ರಂದು ಮಧ್ಯಾಹ್ನ 3:30ಕ್ಕೆ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಸಭಾಂಗಣದಲ್ಲಿ ಗಣ್ಯರ ಸಮಕ್ಷಮದಲ್ಲಿ ನಡೆಯಲಿ ಇರುವುದು ಎಂದು ಅನಿಲ್ ಲೋಬೊ ತಿಳಿಸಿದ್ದಾರೆ.
ಶತಮಾನತ್ರ ದಶಮಾನೋತ್ಸವದ ಸಂದರ್ಭದಲ್ಲಿ 7.60 ಪರ್ಸೆಂಟ್ ಬಡ್ಡಿ ದರದಲ್ಲಿ ವಿಶೇಷ ಠೇವಣಿ ಯೋಜನೆಯನ್ನು ಪರಿಚಯಿಸಿದ್ದು ಸೀಮಿತ ಯೋಜನೆಯ ಲಾಭವನ್ನು ಗ್ರಾಹಕರು ಪಡೆದುಕೊಳ್ಳಬೇಕು ಇತರ ರಾಷ್ಟ್ರಕೃತ ಮತ್ತು ವಾಣಿಜ್ಯ ಬ್ಯಾಂಕುಗಳಿಗೆ ಇರುವಂತೆ ಎಂಸಿಸಿ ಬ್ಯಾಂಕ್ ನಲ್ಲಿ ಗ್ರಾಹಕರ ಐದು ಲಕ್ಷದವರೆಗೆ ಠೇವಣಿಗೆ ಕ್ರೆಡಿಟ್ ಗ್ಯಾರಂಟಿ .ಕಾರ್ಪೊರೇಷನ್ ಡಿಜೆ ಇದರಿಂದ ಸೌಲಭ್ಯವಿರುವುದರಿಂದ ಗ್ರಾಹಕರು ನಿಶ್ಚಿತ್ಯಯಿಂದ ಎಂಸಿಸಿ ಬ್ಯಾಂಕ್ ನಲ್ಲಿ ಠೇವಣಿ ವ್ಯವಹಾರ ಮಾಡಬಹುದು ವಿದ್ಯಾ ಭವಿಷ್ಯ ವಿದ್ಯಾರ್ಥಿ ಉಳಿತಾಯ ಖಾತೆಗೆ ಎಂಸಿಸಿ ಬ್ಯಾಂಕ್ ನಲ್ಲಿ ಶೇಕಡ 5 ಬಡ್ಡಿಯನ್ನು ನೀಡಲಾಗುತ್ತದೆ ಇದರ ಜೊತೆಗೆ ಬ್ಯಾಂಕ್ ನಲ್ಲಿ ಚಿನ್ನಾಭರಣ ಸಾಲ ವಾಹನ ಸಾಲ ನೀಡಲಾಗುವುದು ಎಂದು ಅನಿಲ್ ಲೋಬೊ ತಿಳಿಸಿದ್ದಾರೆ