News Kannada
Thursday, June 01 2023
ಮಂಗಳೂರು

ಮಂಗಳೂರು: ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದ ಮಾದವ ಗೌಡ

Kumaraswamy is sure to be the chief minister of the state, says Madhava Gowda
Photo Credit : R Bhat

ಮಂಗಳೂರು: ರಾಜ್ಯದಲ್ಲಿ ಪಂಚ ರತ್ನ ರಥ ಯಾತ್ರೆಯ ಪೂರ್ವ ತಯಾರಿ ಯಾಗಿ ಮಂಗಳೂರು ದಕ್ಷಿಣ ವಿದಾನ ಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಪ್ರಚಾರ ಚಾಲನೆಯನ್ನು ಕದ್ರಿ ಮಂಜುನಾಥ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಅಧ್ಯಕ್ಷ ಅಧ್ಯಕ್ಷರಾದ ಜಾಕೆ ಮಾದವ ಗೌಡರು ಚಾಲನೆ  ನೀಡಿದರು.

ರಾಜ್ಯದಲ್ಲಿ 2023 ರ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ನಿಶ್ಚಿತ. ಅವರ ಜಲಧಾರೆ ಹಾಗೂ ಪಂಚ ರತ್ನ ಯೋಜನೆ ಈ ರಾಜ್ಯದ ನವನಿರ್ಮಾಣದ ಕಲ್ಪನೆ. ರಾಜ್ಯದ ಮೂಲೆ ಮೂಲೆಗಳಿಂದ ಸಂಪೂರ್ಣ ಬೆಂಬಲ ದೊರಕುತ್ತಿದು ವಿರೋಧ ಪಕ್ಷಗಳು ಭಯಬೀತರಾಗಿದಾರೆ ಎಂದು ಹೇಳಿದರು. ಹಾಗೂ ದಕ್ಷಿಣ ವಿದಾನ ಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಯಾಗಿ ಸುಮತಿ ಹೆಗ್ಡೆ ಎಂದು ಅಯ್ಕೆ ಮಾಡಲಾಗಿದೆ ಎಂದು ಹೇಳಿದರು.

ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಹಾಗೂ ನಿಯೋಜಿತ ಅಭ್ಯರ್ಥಿ  ಸುಮತಿ ಹೆಗ್ಡೆ ಮಾತನಾಡಿ ಕುಮಾರಸ್ವಾಮಿಯ ಆದೇಶದ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಿದು ವಿಧಾನಸಭಾ ಕ್ಷೇತ್ರದ 38  ವಾರ್ಡಗಳಲಿ ಪ್ರಚಾರ ಜಾತ ಸಂಚರಿಸಲಿದೆ. ಹಾಗೂ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಬೇಟಿ ನೀಡಲಿದೆ ಎಂದು ಹೇಳಿದರು.

ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ಮಾತನಾಡಿ ಬಿಜೆಪಿ ಪಕ್ಷ ಜನರಲ್ಲಿ ಭಯ ಭೀತಿ ದ್ವೇಷ. ಹಾಗೂ ಭ್ರಷ್ಟಾಚಾರ , ಬೆಲೆ ನಿಯಂತ್ರಣ ಮಾಡಲು ಸಂಪೂರ್ಣ ಸೋತಿದ್ದು ಇನೊಂದೆಡೆ ಕಾಂಗ್ರೆಸ್ ಅಧಿಕಾರ ಪಡೆದ ಹಾಗೆ ತಿರುಕನ ಕನಸು ಕಂಡಿದ್ದು ಮುಖ್ಯಮಂತ್ರಿ ಪೈಪೋಟಿಯಲ್ಲಿ ತೊಡಗಿದೆ. ಆದರೆ ಜೆಡಿಎಸ್ ಪಕ್ಷ ಜನ ಸಾಮಾನ್ಯರ ಕಷ್ಟ ಅರಿತುಕೊಳ್ಳಲು ಪಂಚ ರತ್ನ ಯೋಜನೆ ಮೂಲಕ ಜನರ ಜೊತೆಯಲ್ಲಿ ಮಗ್ನರಾಗಿದೆ ಎಂದು ಹೇಳಿದರು.

ರಾಜ್ಯ ಜೆಡಿಎಸ್ ನಾಯಕರಾದ ರತ್ನಾಕರ ಸುವರ್ಣ, ಜಮೀರ್ ಷಾ, ಇಕ್ಬಾಲ್ ಮುಲ್ಕಿ. ದಿನಕರ್ ಉಳ್ಳಾಲ್ ಕಡಬ ಕ್ಷೇತ್ರದ ಅಧ್ಯಕ್ಷ ಮೀರಾ ಸಾಹೇಬ್,ಯುವನಾಯಕ ಪೈಜಾಲ್ ಮುಂತಾದವರು ಮಾತನಾಡಿದರು. ಕನಕದಾಸ ಕುಳೂರ್, ಮುನೀರ್ ಮುಕ್ಕಚೇರಿ,  ವಿನ್ಸೆಂಟ್ ಕೋಡಿಕಲ್, ಅಲ್ತಾಫ್ ತುಂಬೆ, ರವೀಂದ್ರ ಉಳ್ಳಾಲ,  ವೀಣಾ ಶೆಟ್ಟಿ, ಭಾರತೀ ಪುಷ್ಪರಾಜನ್  ಪ್ರಿಯಾ ಸಾಲಿಯಾನ್, ಕವೀತಾ ಜೋಹರ್.  ಬಸೀರ್ ಬೇಗಂ, ಲತೀಫ್ಓಳಚೀಲ್,ಎಚ್.ಕೆ.ಚಂದ್ರಶೇಖರ್ ಸುಮೀತ್ ಸುವರ್ಣ,ನಾಸಿರ್ ಬೆಂಗ್ರೆ, ರಾಶ್  ಬ್ಯಾರಿ,  ನೀಲಂ, ಬಸವರಾಜ್, ಮನೋಜ್, ಜಾವೇದ್ ನಜೀರ್,  ಯುವ ಜನತಾದಳ ವಿಧ್ಯಾರ್ಥಿ ಅಧ್ಯಕ್ಷ  ಬಿಲಾಲ್.ಮಹಮದ್ ಉಪಸ್ಥಿತಿತರಿದರು. ಅಲ್ತಾಫ್ ತುಂಬೆ ನಿರೂಪಿಸಿದರು.

See also  ಬೆಳ್ತಂಗಡಿ: ಕುಸಿದು ಬಿದ್ದು ವ್ಯಕ್ತಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

186

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು