News Kannada
Wednesday, March 22 2023

ಮಂಗಳೂರು

ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾ ಫಲಿತಾಂಶ ಮತ್ತು ಅಂಕಪಟ್ಟಿ ವಿತರಣೆ ಕುರಿತು ಸ್ಪಷ್ಟನೆ

ಮಂಗಳೂರು ವಿಶ್ವವಿದ್ಯಾನಿಲಯ
Photo Credit : News Kannada

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾ ಫಲಿತಾಂಶ ಮತ್ತು ಅಂಕಪಟ್ಟಿಗಳ ವಿತರಣೆ ಕುರಿತಂತೆ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಗೊಂದಲಗಳಿಗೆ ಸಂಬಂಧಿಸಿದಂತೆ ಈ ಕಚೇರಿಯಿಂದ ಸ್ಪಷ್ಟಣೆಯನ್ನು ನೀಡಲಾಗಿದೆ.

Aug/Sept 2021, Sept/Oct 2021 ರಲ್ಲಿ ಜರುಗಿದ 1,3,5,6 ನೇ ಸೆಮಿಸ್ಟರ್‌ನ ಪದವಿ ಪರೀಕ್ಷಾ ಕಾರ್ಯಗಳು ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಿಸಿ ಅಂಕಪಟ್ಟಿಗಳನ್ನು ವಿತರಿಸಲಾಗಿದೆ ಮತ್ತು ಮರುಮೌಲ್ಯಮಾಪನ ಕಾರ್ಯಗಳು ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಿಸಿ ಅಂಕಪಟ್ಟಿಗಳನ್ನು ವಿತರಿಸಲಾಗಿದೆ.

ಕೋವಿಡ್ 19 ಸಂದರ್ಭದಲ್ಲಿ Aug/Sept 2021, Sept/Oct 2021 ಪರೀಕ್ಷೆಗೆ ಕೋವಿಡ್‌ನಿಂದ ಗೈರುಹಾಜರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿ Dec 2021 ಮತ್ತು Jan 2022 ರಲ್ಲಿ ವಿಶೇಷ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿ, ಅಂಕಪಟ್ಟಿಗಳನ್ನು ನೀಡಲಾಗಿದ್ದು ಗೊಂದಲಗಳಿರುವ ಫಲಿತಾಂಶಗಳನ್ನು ದಿನಾಂಕ 10.02.2023 ರೊಳಗಾಗಿ ನೀಡಲಾಗುವುದು.

April/May 2022ರಲ್ಲಿ ಜರುಗಿದ 1ನೇ ಸೆಮಿಸ್ಟರ್ UUCMS ಮತ್ತು 3,5ನೆಯ(Mulinx) ಸೆಮಿಸ್ಟರ್ ನ ಪರೀಕ್ಷಾ ಕಾರ್ಯಗಳು ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಿಸಲಾಗಿದೆ. 35 ನೆಯ ಸೆಮಿಸ್ಟರ್ ಅಂಕಪಟ್ಟಿಗಳನ್ನು ವಿತರಿಸಲಾಗುತ್ತಿದೆ. UUCMS 1ನೇ ಸೆಮಿಸ್ಟರ್ “ಮರುಮೌಲ್ಯಮಾಪನಕ್ಕಾಗಿ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.

Sept/Oct 2022ರ ಅಂತಿಮ ಸೆಮಿಸ್ಟ‌ನ ಹಾಗೂ ನಾಲ್ಕನೇ ಸೆಮಿಸ್ಟರ್‌ನ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಲಾಗಿದ್ದು ಆರನೇ ಸೆಮಿಸ್ಟರ್‌ ಅಂಕಪಟ್ಟಿಗಳನ್ನು ವಿತರಿಸಲಾಗಿದೆ ಮತ್ತು UUCMS 2ನೇ ಸೆಮಿಸ್ಟರ್ ಮೌಲ್ಯಮಾಪನ ಮುಕ್ತಾಯವಾಗಿದ್ದು, Result Process ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ತಾಂತ್ರಿಕ ಸಮಿತಿಯು ದಿನಾಂಕ 02.02.2023 ರಂದು ವಿ.ವಿಗೆ ಬೇಟಿ ನೀಡಿ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರುಗಳೊಡನೆ ಸಂವಾದ ನಡೆಸಲಾಗಿದೆ. ಆದುದರಿಂದ, ದಿನಾಂಕ 15,02,2023 ರೊಳಗಾಗಿ ಫಲಿತಾಂಶ ಪ್ರಕಟಿಸಲಾಗುವುದು,

Feb/March 2023 UUCMS 3ನೇ ಸೆಮಿಸ್ಟರ್ ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗಳ 1ನೇ ಸೆಮಿಸ್ಟರ್ ಪರೀಕ್ಷಾ ಕಾರ್ಯಗಳು ಫೆಬ್ರವರಿ 6 ರಿಂದ ಪ್ರಾರಂಭವಾಗುತ್ತದೆ.

ಈ ನಡುವೆ ಕೆಲವು ಫಲಿತಾಂಶಗಳು ತಡವಾಗಿ ಪ್ರಕಟಗೊಂಡು ಇವುಗಳ ಬಾಕಿ ಉಳಿದ ಅಂಕಪಟ್ಟಿಗಳನ್ನು ಫೆಬ್ರವರಿ 10 ರೊಳಗೆ ವಿತರಿಸಲಾಗುವುದು, ದಿನಾಂಕ 31.01.2023 ರಂದು ನಡೆದ ಸಿಂಡಿಕೇಟು ಸಭೆಯಲ್ಲಿ ಮಾನ್ಯ ಕುಲಾಧಿಪತಿಗಳ ಆದೇಶದಂತೆ ಅಂಕಪಟ್ಟಿಗಳನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ನಿರ್ದೇಶನ ನೀಡಿರುವುದರಿಂದ ದಿನಾಂಕ 10.02.2023 ರ ಒಳಗೆ ಮುದ್ರಿಸಿ ವಿತರಿಸಲಾಗುವುದು.

UUCMSನ ಅಡಿಯಲ್ಲಿ ಬರುವ ಎಲ್ಲಾ ಪರೀಕ್ಷಾ ಮತ್ತು ಫಲಿತಾಂಶ ವಿವರಗಳನ್ನು Digilockerಗೆ ವರ್ಗಾಯಿಸಲಾಗುವುದು.

ಪರೀಕ್ಷೆಯ ನಂತರ ಉತ್ತರಪತ್ರಿಕೆಗಳನ್ನು ಅಂಚೆ ಕಛೇರಿಯ ಮುಖಾಂತರ ಕಳುಹಿಸುವ ಪ್ರಸ್ತಾವನೆಯ ಪತ್ರವನ್ನು ಹೊರಡಿಸಿದ ನಂತರ ಕಾಲೇಜುಗಳಿಂದ ಉತ್ಸಮ ಪ್ರತಿಕ್ರಿಯೆ ಬಾರದಿರುವುದರಿಂದ ಅಂಚೆ ಮೂಲಕ ಉತ್ತರಪತ್ರಿಕೆಯನ್ನು ಸಂಗ್ರಹಿಸುವ ಪ್ರಸ್ತಾವನೆಯನ್ನು ಹಿಂಪಡೆದು ಹಿಂದೆ ಚಾಲ್ತಿಯಲ್ಲಿದ್ದ ಪದ್ಧತಿಯನ್ನು ಮುಂದುವರೆಸಲಾಗುವುದು, ಹಾಗೆಯೇ ಏಕೇಂದ್ರಿತ ಮೌಲ್ಯಮಾಪನದ ಬದಲು ಕೇಂದ್ರೀಕೃತ ಮೌಲ್ಯಮಾಪನವನ್ನು ನಡೆಸುವಂತೆ UUCMS ನಿಂದ ನಿರ್ದೇಶನವಿರುವುದರಿಂದ ಮುಂದಿನ ಮೌಲ್ಯಮಾಪನವು ಕೇಂದ್ರೀಕೃತ ವ್ಯವಸ್ಥೆಯಿಂದ ನಡೆಯುತ್ತದೆ.

See also  ಮಂಗಳೂರು: ಕುದ್ರೋಳಿ ದಸರಾ ಮೆರಣಿಗೆಗೆಯಲ್ಲಿ ಭಾಗವಹಿಸಲಿವೆ ನಾಡಿನ ಖ್ಯಾತ ಜನಪದ ತಂಡಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು