News Kannada
Sunday, April 02 2023

ಮಂಗಳೂರು

ಸುಳ್ಯ: ಕುರುಂಜಿಗುಡ್ಡೆ ಭಾಗದ ಜನರ ಬಹುಕಾಲದ ರಸ್ತೆ ನಿರ್ಮಾಣದ ಕನಸು ನನಸು

The long-cherished dream of the people of Kurunjigudde has come true.
Photo Credit : News Kannada

ಸುಳ್ಯ: ಕುರುಂಜಿಗುಡ್ಡೆ ಭಾಗದ ಜನರ ಬಹುಕಾಲದ ಬೇಡಿಕೆಯ ರಸ್ತೆ ನಿರ್ಮಾಣದ ಕನಸನ್ನು ಸುಳ್ಯ ನಗರ ಪಂಚಾಯತ್‌ ಹೊಸ ರಸ್ತೆ ನಿರ್ಮಿಸುವ ಮೂಲಕ ಈಡೇರಿಸಿದೆ.

ಕುರುಂಜಿಗುಡ್ಡೆಯ ಸಮೀಪದಲ್ಲಿ ಹತ್ತು ಮನೆಗಳಿದ್ದು, ಅವರಿಗೆ ಸಂಚಾರಕ್ಕೆ ರಸ್ತೆಯಿಲ್ಲದೆ ಕಾಲು ದಾರಿಯನ್ನೇ ಅವಲಂಬಿಸಬೇಕಿತ್ತು. ಪ್ರತಿ ವರ್ಷ ಚುನಾವಣೆ ವೇಳೆ ಈ ಭಾಗದ ಗ್ರಾಮಸ್ಥರು ರಸ್ತೆ ನಿರ್ಮಾಣದ ಬೇಡಿಕೆಯನ್ನು ಮುಂದಿಟ್ಟಿದ್ದರೂ ಈಡೇರಲಿಲ್ಲ. ಇದರಿಂದ ಮಕ್ಕಳಿಗೆ ಶಾಲೆಗೆ ಹೋಗಲು, ತುರ್ತುಪರಿಸ್ಥಿತಿಯಲ್ಲಿ ಸಂಚರಿಸಲು ಕಷ್ಟವಾಗುತ್ತಿತ್ತು. ಆದರೆ ಈ ಬಾರಿ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅವರಿಗೆ ಸ್ಥಳೀಯರು ರಸ್ತೆ ನಿರ್ಮಿಸುವಂತೆ ಮನವಿ ಮಾಡಿದ್ದರು. ಕೂಡಲೇ ಅವರು ಎಲ್ಲ ಮನೆಗಳಿಗೆ ತೆರಳಿ ಸ್ಥಳದ ಸಮಸ್ಯೆಯ ಬಗ್ಗೆ ತಿಳಿ ಹೇಳಿ ಈ ಮನೆಗಳಿಗೆ ಹೋಗುವ ಸಣ್ಣ ರಸ್ತೆಯನ್ನು10 ಫೀಟ್‌ನ ದೊಡ್ಡ ರಸ್ತೆಯಾಗಿ ನಿರ್ಮಿಸಿಕೊಟ್ಟಿದ್ದಾರೆ.

ರಸ್ತೆಗೆ ಜಾಗ ನೀಡಿದ ಸ್ಥಳೀಯರು: ರಸ್ತೆ ನಿರ್ಮಾಣಕ್ಕೆ ಸ್ಥಳೀಯರಾದ ಚೆನ್ನಯ್ಯ ಕುರುಂಜಿಗುಡ್ಡೆ, ಉಪೇಂದ್ರ ನಾಯಕ್, ಸರಸ್ವತಿ, ಸ್ವಾಮಿನಾಥನ್, ಚಿನ್ನಸ್ವಾಮಿ, ಉದಯ ಕುರುಂಜಿಗುಡ್ಡೆ, ಮಣಿ ಕುರುಂಜಿ ಗುಡ್ಡೆ, ಸುಂದರ ಕುರುಂಜಿ ಗುಡ್ಡೆ ಜಾಗ ನೀಡಿದ್ದಾರೆ.

ಸುಮಾರು ವರ್ಷದಿಂದ ರಸ್ತೆ ನಿರ್ಮಿಸಬೇಕೆಂದು ಇಲ್ಲಿಯ ಜನರು ಬೇಡಿಕೆ ಸಲ್ಲಿಸುತ್ತಿದ್ದರು. ಆದರೆ ಈಗ ನಗರ ಪಂಚಾಯತ್ ವತಿಯಿಂದ ರಸ್ತೆ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು.

See also  ಮಂಗಳೂರು: ಗೃಹ ಸಚಿವರ ಹೇಳಿಕೆ ಅಡಿಕೆ ಮಾರುಕಟ್ಟೆಯ ಮೇಲೆ ದುಷ್ಪರಿಣಾಮ ಬೀರುವ ಆತಂಕವಿದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು