News Kannada
Saturday, April 01 2023

ಮಂಗಳೂರು

ಸುಳ್ಯ: ಸಾಹಿತಿ ಭೀಮರಾವ್ ವಾಷ್ಠರ್ ಅವರ ಜನ್ಮದಿನ ಸಂಭ್ರಮ

Sullia: Writer Bhimrao Washthar's birth anniversary celebrated
Photo Credit : News Kannada

ಸುಳ್ಯ: ಸುಳ್ಯದ ಚಂದನ ಸಾಹಿತ್ಯ ವೇದಿಕೆಯ 12 ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾಹಿತಿ, ಜ್ಯೋತಿಷಿಯಾದ ಎಚ್. ಭೀಮರಾವ್ ವಾಷ್ಠರ್ ರವರ 47 ನೇ ವರ್ಷದ ಹುಟ್ಟುಹಬ್ಬ ಸಂಭ್ರಮದ ಪ್ರಯುಕ್ತ ಚಂದನ ಕವಿ ಸಂಗಮ -2023 ಸಮಾರಂಭದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ, ಕೃತಿಗಳ ಬಿಡುಗಡೆ, ಹಾಡೊಂದು ನಾ ಹಾಡುವೆನು ಫೈನಲ್ ಸಂಗೀತ ಸ್ಪರ್ಧೆ, ಸಾಧಕರಿಗೆ ಬಿರುದು – ರಾಜ್ಯಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸುಳ್ಯದ ಚಾರ್ಟೆಡ್ ಅಕೌಂಟೆಂಟ್ ಗಣೇಶ್ ಭಟ್ ರವರು ವಹಿಸಿದ್ದರು. ಸರ್ವಾದ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ನಾರಾಯಣ ನಾಯ್ಕ ಕುದುಕೋಳಿ ರವರು ವಹಿಸಿ ಸಾಹಿತ್ಯ ಅಂತರಂಗದಿಂದ ಮೂಡಿದಾಗ ಮಾತ್ರ ಸಮಾಜದಲ್ಲಿ ಪ್ರತಿಫಲನಗೊಂಡು ಸಮಾಜದಲ್ಲಿ ಬದಲಾವಣೆ ಮೂಡುವದು ಖಂಡಿತ ಅಂತ ಹೇಳಿದರು .

ಸಾಧಕರಿಗೆ ಪ್ರಶಸ್ತಿ ಮತ್ತು ಬಿರುದು ಪ್ರದಾನ ಮಾಡಿದ ಸುಳ್ಯ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಪೇರಾಲು ಶುಭ ಹಾರೈಸಿದರು .ಕಾಸರಗೋಡಿನ ಲತಾ ಆಚಾರ್ಯ ಬನಾರಿ ಅವರ ಭಾವಗಾನ ಸಾಹಿತ್ಯ ಕೃತಿ ಮತ್ತು ಶ್ರೀ ಶರಭಯ್ಯ ಸ್ವಾಮೀ ತುರ್ವಿಹಾಳ ಅವರ ಭಾವ ಭಾಮಿನಿ ಜೀವ ಷಟ್ಪದಿ ಕೃತಿಗಳನ್ನು. ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಅಧ್ಯಕ್ಷರಾದ ಎಚ್ ಭೀಮರಾವ್ ವಾಷ್ಠರ್ ರವರು ಬಿಡುಗಡೆ ಮಾಡಿದರು.

ಹಿರಿಯ ಸಾಹಿತಿ ಶ್ರೀ ಹರಿ ನರಸಿಂಹ ಉಪಾಧ್ಯಾಯ ರವರು ಎರಡೂ ಕೃತಿಗಳನ್ನು ಪರಿಚಯ ಮಾಡಿದರು. ಸಿ ಕೆ ನವೀನಚಂದ್ರ ಚಾತುಬಾಯಿ ಅವರಿಗೆ 2023 ನೇ ಸಾಲಿನ ಆದರ್ಶ ಕೃಷಿರತ್ನ ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸಾಧಕರಾದ ಚಂದ್ರಾವತಿ ಬಡ್ಡಡ್ಕ ಅವರಿಗೆ ಚಂದನ ಸಾಹಿತ್ಯ ರತ್ನ ಪ್ರಶಸ್ತಿ, ಕೃಷ್ಣಪ್ಪ ಬಂಬಿಲ, ಚಂದನ ರಂಗಕಲಾ ರತ್ನ ಪ್ರಶಸ್ತಿ, ಮುರಳಿಕೃಷ್ಣ ಯಾದವ್ ನೀರ್ಚಾಲು ಅವರಿಗೆ ಚಂದನ ಸಂಗೀತ ರತ್ನ ಪ್ರಶಸ್ತಿ , ಲತಾ ಆಚಾರ್ಯ ಬನಾರಿ ಅವರಿಗೆ ಚಂದನ ಕಾವ್ಯ ಕುಸುಮ ಪ್ರಶಸ್ತಿ, ಸುಬ್ರಾಯ ಕಲ್ಪನೆ ಅವರಿಗೆ ಚಂದನ ಸಂಗೀತ ರತ್ನ ಪ್ರಶಸ್ತಿ , ಮಂಜುನಾಥ ನಾಯಕ ಎನ್ ಆರ್ ಅವರಿಗೆ ಚಂದನ ಸಾಹಿತ್ಯ ಕಿರಣ ಪ್ರಶಸ್ತಿ , ಅಬ್ದುಲ್ ಸಮದ್ ಬಾವಾ ಅವರಿಗೆ ಚಂದನ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.

ನಂತರ ಚಂದನ ಹಿರಿಯ ಸಾಹಿತ್ಯ ಗೋಷ್ಠಿ ನಡೆಯಿತು . ಹಾಡೊಂದು ನಾ ಹಾಡುವೆನು ಸಂಗೀತ ಸ್ಪರ್ಧೆಯ ಕಾರ್ಯಕ್ರಮವೂ ಕೂಡ ಖ್ಯಾತ ಗಾಯಕರಾದ ಮಿಥುನ್ ರಾಜ್ ವಿದ್ಯಾಪುರ ಅವರ ನೇತೃತ್ವದಲ್ಲಿ ನಡೆಯಿತು . ಖ್ಯಾತ ಕವಯಿತ್ರಿ ಶಾಂತಾ ಕುಂಟಿನಿ , ಸಾಹಿತಿ ವೈಲೇಶ್ ಪಿ ಎಸ್ ಕೊಡಗು , ಗೋಪಾಲ ಕೃಷ್ಣ ಭಟ್ ಮಾನವಳಿಕೆ, ಕವಿಗೋಷ್ಠಿ ಉದ್ಘಾಟಕರಾದ ಹಿರಿಯ ಸಾಹಿತಿ ಹಾ ಮ ಸತೀಶ್, ವೀರೇಶ್ ಎಂ ಎಸ್ ಸಿಂಧನೂರು ಮುಖ್ಯ ಅತಿಥಿಗಳಾಗಿದ್ದರು. ಖ್ಯಾತ ಕವಯಿತ್ರಿ ವಿಂಧ್ಯಾ ಎಸ್ ರೈ ಅವರು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಒಟ್ಟು 40 ಜನ ಕವಿಗಳು ಭಾಗವಹಿಸಿದ್ದರು. ಸುಮಾ ಕಿರಣ್ ಮಣಿಪಾಲ್ ಮತ್ತು ಆಶಾ ಮಯ್ಯ ಹಾಗೂ ಸುಮಂಗಲ ಲಕ್ಷ್ಮಣ ಕೋಳಿವಾಡ ನಿರೂಪಿಸಿದರು. ಪೆರುಮಾಳ ಲಕ್ಷ್ಮಣ ಐವರ್ನಾಡು ಪ್ರಾರ್ಥನೆ ಹಾಡಿದರು. ಸಮ್ಯಕ್ತ್ ಜೈನ ಕಡಬ ಮತ್ತು ನಾರಾಯಣ್ ಕುಂಬ್ರ ವಂದಿಸಿದರು.

See also  ಬೆಂಗಳೂರು: 424 ಪಾರ್ಕ್‍ಗಳಲ್ಲಿ ಕ್ರೀಡಾ ಸಾಮಗ್ರಿಗಳನ್ನು ಅಳವಡಿಸಲಾಗಿದೆ ಎಂದ ಆರ್.ಅಶೋಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು