News Kannada
Sunday, September 24 2023
ಮಂಗಳೂರು

ಮಂಗಳೂರು ಉತ್ತರ ಸಂಚಾರಿ ಠಾಣೆಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಡಾ. ವೈ ಭರತ್ ಶೆಟ್ಟಿ

Inaugurating the new building of Mangaluru North Traffic Police Station, Dr. Y Bharath Shetty
Photo Credit : News Kannada

ಮಂಗಳೂರು: 2 ಕೋಟಿ ರೂ ವೆಚ್ಚದಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾದ ಮಂಗಳೂರು ಉತ್ತರ ಸಂಚಾರಿ ಠಾಣೆಯ ನೂತನ ಕಟ್ಟಡವನ್ನು ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಉದ್ಘಾಟಿಸಿದರು.

ನೂತನ ಠಾಣೆ 2 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ವಿಶಾಲವಾದ ಪಾರ್ಕಿಂಗ್ , ಪೆರೆಡ್‍ಗೆ ಬೇಕಾದ ಸ್ಥಳಾವಕಾಶ, ವಿಶಾಲವಾದ ಕಟ್ಟಡವನ್ನು ಹೊಂದಿದೆ. ಪ್ರಸ್ತುತ ಬೈಕಂಪಾಡಿ ಎಪಿಎಂಸಿ ಯಾರ್ಡ್‍ನಲ್ಲಿರುವ ಈ ಠಾಣೆ ಶೀಘ್ರ ಸ್ಥಳಾಂತರಗೊಳ್ಳಲಿದೆ.

ಇದಕ್ಕೆ ಅನುದಾನ ಒದಗಿಸಿಕೊಡುವಲ್ಲಿ ಸಹಕರಿಸಿದ ಗೃಹಮಂತ್ರಿಗಳು, ಸಂಬಂಧಪಟ್ಟ ಇಲಾಖೆಯ ಪೊಲೀಸ್ ನಿರ್ದೇಶಕರು ಹಾಗೂ ಇತರ ಅಧಿಕಾರಿಗಳನ್ನು ಶಾಸಕರು ಸ್ಮರಿಸಿಕೊಂಡರಲ್ಲದೆ, ನೂತನ ಠಾಣೆಗೆ ಕಂಪ್ಯೂಟರ್ , ಹಾಗೂ ಇತರ ಮೂಲಸೌಕರ್ಯದ ಅಗತ್ಯವಿದ್ದು ಉದ್ಯಮಿಗಳು ಸಹಕರಿಸುವಂತೆ ಮನವಿ ಮಾಡಿದರು.

ಪೊಲೀಸ್ ಆಯುಕ್ತ ಕುಲ್‍ದೀಪ್ ಆರ್ ಜೈನ್, ಕಾನೂನು ಸುವ್ಯವಸ್ಥೆ ಪೊಲೀಸ್ ಉಪಆಯುಕ್ತ ಅಂಶುಕುಮಾರ್, ಅಪರಾಧಿಕ ಸಂಚಾರ ಪೊಲೀಸ್ ಉಪಆಯುಕ್ತ ಬಿ.ಪಿ ದಿನೇಶ್ ಕುಮಾರ್, ಪೊಲೀಸ್ ವಸತಿ ವ್ಯವಸ್ಥಾಪಕಿ ಪ್ರಜ್ನಾ ಆನಂದ್, ಸಂಚಾರ ಎಸಿಪಿ ಗೀತಾ ಕುಲಕರ್ಣಿ, ಉತ್ತರ ಸಂಚಾರಿ ಸಿಐ ಸುರೇಶ್ ಕುಮಾರ್, ಮನಪಾ ಸದಸ್ಯರು, ಉದ್ಯಮಿಗಳು, ವಿವಿಧ ಸಂಘ ಸಂಸ್ಥೆ ಪ್ರಮುಖರು ಉಪಸ್ಥಿತರಿದ್ದರು.

See also  ಮೈಸೂರು:  ತಿ.ನರಸೀಪುರದಲ್ಲಿ ಚಿರತೆ ಅಟ್ಟಹಾಸ, ಯುವತಿ ಬಲಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು