News Kannada
Friday, June 09 2023
ಮಂಗಳೂರು

ಹಾಲು ಉತ್ಪಾದನೆ ದ್ವಿಗುಣವಾಗಲು ಸರ್ಕಾರದ ಶ್ರಮ ಕಾರಣ- ಗೌರವ್ ಭಾಟಿಯಾ

Our government's achievement is that milk production has now doubled
Photo Credit : News Kannada

ಮಂಗಳೂರು: ಕರ್ನಾಟಕದ ನಂದಿನಿ ಮತ್ತು ಅಮುಲ್ ವಿಲೀನ ಆರೋಪ ಕಾಂಗ್ರೆಸಿನದ್ದು. ನಂದಿನಿ ನಮ್ಮ ಸ್ವಾಭಿಮಾನ, ನಂದಿನಿ ಕರ್ನಾಟಕದ ಪಾಲಿನ ಹೆಮ್ಮೆ ನಂದಿನಿ ಹಿತ ಕಾಯಲು ಬಿಜೆಪಿ ಬದ್ಧವಿದೆ. ಕಾಂಗ್ರೆಸ್ ಸುಳ್ಳುಗಳಿಂದಲೇ ಜನರನ್ನು ತಪ್ಪು ದಾರಿಗೆಳೆಯುತ್ತಿದೆ. 2018 ರಲ್ಲಿದ್ದ ಹಾಲು ಉತ್ಪಾದನೆ ಈಗ ಡಬಲ್ ಆಗಿರುವುದು ನಮ್ಮ ಸರ್ಕಾರದ ಸಾಧನೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.

ಮಂಗಳೂರಿನಲ್ಲಿ ಕೊಡಗು, ಉಡುಪಿ ಮತ್ತು ದಕ್ಷಿಣ ಕನ್ನಡ ಮೂರು ಜಿಲ್ಲೆಗಳ ವ್ಯಾಪ್ತಿಯ ಬಿಜೆಪಿ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಿಲ್ಲ. ಬಿಜೆಪಿಗೆ ರಾಷ್ಟ್ರದ ಹಿತ ನಾಗರಿಕರ ಹಿತವೇ ಮುಖ್ಯ ಸಿದ್ದರಾಮಯ್ಯ ಸರ್ಕಾರ 1700 ಮಂದಿ ಪಿಎಫ್‌ಐ, ಎಸ್ಟಿಪಿಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿತ್ತು. ಅದರಿಂದಾಗಿ ಕರಾವಳಿ ಸೇರಿ ರಾಜ್ಯದಲ್ಲಿ ಕೊಲೆ ಸರಣಿ ನಡೆದಿತ್ತು. ಜನರ ಶಾಂತಿ, ನೆಮ್ಮದಿ ಕದಡುವ ಸ್ಥಿತಿ ತಲೆದೋರಿತ್ತು. ಪೊಲೀಸರ ಆತ್ಮಸ್ಥೆರ್ಯವನ್ನೇ ಕುಸಿಯುವಂತೆ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ.

ಹಾಲಿ ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗಿದೆ. ಅಭಿವೃದ್ಧಿ ಕಾರ್ಯಗಳಾಗಿವೆ. ನಾವು ತುಷೀಕರಣ ಸಲುವಾಗಿ ರಾಷ್ಟ್ರದ ಹಿತಬಲಿಕೊಡಲ್ಲ. ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ ತುಷೀಕರಣ ಮಿತಿಮೀರಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ವೇಣುಗೋಪಾಲ್ ಸಹಿತ ಕಾಂಗ್ರೆಸ್ ನಾಯಕರು ಪಿಎಫ್‌ಐ ಬ್ಯಾನ್ ವಿರುದ್ಧ ಇದ್ದರು. ಆದರೆ ಮೋದಿ ಸರ್ಕಾರ ಕಠಿಣ ನಿರ್ಧಾರ ಕೈಗೊಂಡು ಪಿಎಫ್‌ಐ ಬ್ಯಾನ್ ಮಾಡಿತ್ತು. ಜನರಿಗೆ ನೆನಪು ಕಡಿಮೆ. ಹಾಗಂತ, ಕರ್ನಾಟಕದ ಜನ ಸೆಕೆಂಡ್ ಡಿಗ್ರಿ ಸಿಟಿಜನ್ ಅಲ್ಲ. ಡಬಲ್ ಇಂಜಿನ್ ಸರ್ಕಾರಕ್ಕಾಗಿ ಮತ ನೀಡಲಿದ್ದಾರೆಂಬ ವಿಶ್ವಾಸ ಇದೆ.

ಕರ್ನಾಟಕದಲ್ಲಿ ಸುಳ್ಳು ಭರವಸೆಗಳಿಂದ, ಗ್ಯಾರಂಟಿ ಘೋಷಣೆಯಿಂದ ಮತ ಗಳಿಸಬಹುದು ಅಂದು ಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಬಗ್ಗೆ ಜನರಿಗೆ ಅರಿವು ಇದೆ. ಈ ಹಿಂದೆ ಛತ್ತೀಸ್ತಢದಲ್ಲಿ ಅಧಿಕಾರಕ್ಕೆ ಬಂದರೆ ಹತ್ತು ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡ್ತೀವಿ ಅಂತ ರಾಹುಲ್ ಗಾಂಧಿ ಹೇಳಿದ್ದರು. ಉಚಿತ ಭರವಸೆಗಳ ಘೋಷಣೆ ಮಾಡಿದ್ದರು. ಆದರೆ ಅಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಯಾಕೆ ಐದು ವರ್ಷ ಆದರೂ ಈಡೇರಿಸಲು ಆಗಿಲ್ಲ ಎಂದು ಗೌರವ್ ಭಾಟಿಯಾ ಪ್ರಶ್ನೆ ಮಾಡಿದರು.

ಬಿಜೆಪಿ ಸರ್ಕಾರದ ಅಭಿವೃದ್ಧಿಗೆ ಈ ಬಾರಿ ಜನತೆ ಐತಿಹಾಸಿಕ ವಿಜಯ ತಂದುಕೊಡಲಿದ್ದಾರೆ. ಅದರಲ್ಲಿ ಸಂಶಯ ಇಲ್ಲ ಎಂದರು ಭಾಟಿಯಾ. ಜೀವನಾವಶ್ಯಕ ವಸ್ತುಗಳ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಿದೆ ಎಂಬ ಪ್ರಶ್ನೆಗೆ, ಜನಸಾಮಾನ್ಯರಿಗೆ ಬೆಲೆಯೇರಿಕೆಯಿಂದ ಸಮಸ್ಯೆ ಆಗಿಲ್ಲ ಎಂದ ಬಿಜೆಪಿ ಮುಖಂಡ, 2014ರಲ್ಲಿ ಹಣದುಬ್ಬರದ ಸ್ಥಿತಿ ಡಬಲ್ ಡಿಜಿಟ್ ಇತ್ತು. ಆಗ 13 ಪರ್ಸೆಂಟ್ ಇದ್ದ ಹಣದುಬ್ಬರ ಈಗ 5-6 ಪರ್ಸೆಂಟಿಗೆ ಬಂದಿದೆ ಎನ್ನುವುದನ್ನು ಗಮನಿಸಬೇಕು. ಈಗ ದೇಶದ ಜಿಡಿಪಿ ದರವೂ ಹೆಚ್ಚಿದೆ, ಗ್ಯಾಸ್ ಸಿಲಿಂಡರ್ ರೇಟೂ ಹೆಚ್ಚಾಗಿದೆ. ಇದೇ ವೇಳೆ, ದೇಶದಲ್ಲಿ 9.5 ಕೋಟಿ ಬಡವರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್‌ ಕೊಟ್ಟಿದ್ದೇವೆ. ಇವೆಲ್ಲದರ ಮಧ್ಯೆ ಕೆಲವು ವಸ್ತುಗಳ ಬೆಲೆ ಏರಿದೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದರು.

See also  ಬೆಂಗಳೂರು: ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು