News Kannada
Thursday, September 28 2023
ಉಡುಪಿ

ಉಡುಪಿ ಸೀರೆ ನವ ನೇಕಾರರನ್ನು ಭೇಟಿ ಮಾಡಿದ ನಬಾರ್ಡ್ ಸಿಜಿಎಂ

NABARD CGM meets Udupi saree weavers
Photo Credit : News Kannada

ಉಡುಪಿ: ನಬಾರ್ಡ್ ಕರ್ನಾಟಕ ಚೀಫ್ ಜನರಲ್ ಮ್ಯಾನೇಜರ್ ಟಿ ರಮೇಶ್ ಇವರು ಇತ್ತೀಚೆಗೆ ತಾಳಿಪಾಡಿ ನೇಕಾರ ಸಂಘಕ್ಕೆ ಭೇಟಿ ನೀಡಿದರು.

ಕದಿಕೆ ಟ್ರಸ್ಟ್ ನಬಾರ್ಡ್ ಬೆಂಬಲದೊಂದಿಗೆ ನಡೆಸಿದ ಉಡುಪಿ ಸೀರೆ ನೇಕಾರಿಕೆ ತರಬೇತಿ ಪಡೆದ ನವ ನೇಕಾರೊಂದಿಗೆ ಮಾತುಕತೆ ನಡೆಸಿ ನೇಕಾರರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು.

ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಟ್ರಸ್ಟ್ ನ ಪುನಶ್ಚೇತನ ಕಾರ್ಯದ ಬಗ್ಗೆ ವಿವರಿಸಿದರು. ಕದಿಕೆ ಟ್ರಸ್ಟ್ ತರಬೇತಿ ನಂತರವೂ ನೇಕಾರಿಗೆ ಕನಿಷ್ಠ ವೇತನ ಮತ್ತು ಇತರ ಬೆಂಬಲ ಕೊಡುತ್ತಿರುವುದನ್ನು ತಿಳಿಸಿದರು.

ಮುಂದೆ ನಡೆದ ಸಭೆಯಲ್ಲಿ ಚೀಫ್ ಜನರಲ್ ಮ್ಯಾನೇಜರ್ ಅವರು ನೇಕಾರರನ್ನು ಉದ್ದೇಶಿಸಿ ಮಾತನಾಡಿ ನಬಾರ್ಡ್ ನ ವಿವಿಧ ಯೋಜನೆಗಳ ವಿವರ ನೀಡಿದರು. ನವ ನೇಕಾರರಿಗೆ ಪ್ರೋತ್ಸಾಹದ ಮಾತುಗಳನ್ನಾಡಿ, ಸ್ವ ಸಹಾಯ ಸಂಘವನ್ನು ರಚಿಸಿ ಉಳಿತಾಯ ಮಾಡಲು ಉತ್ತೇಜನ ನೀಡಿದರು. ಕದಿಕೆ ಟ್ರಸ್ಟ್ ನ ಕಾರ್ಯವನ್ನು ಶ್ಲಾಘಿಸಿ ಮುಂದೆ ಟ್ರಸ್ಟ್ ನಡೆಸಬಹುದಾದ ಯಾವುದೇ ಉತ್ತಮ ಕಾರ್ಯ ಕ್ಕೆ ನಬಾರ್ಡ್ ಬೆಂಬಲ ಇರುವುದು ಎಂದು ತಿಳಿಸಿದರು.

ದ. ಕ – ಉಡುಪಿ, ನಬಾರ್ಡ್, ಡಿ ಡಿ ಎಮ್, ಸಂಗೀತ ಕರ್ತಾ, ಕದಿಕೆ ಟ್ರಸ್ಟ್ ಕಾರ್ಯದರ್ಶಿ ಚಿಕ್ಕಪ್ಪ ಶೆಟ್ಟಿ, ತಾಳಿಪಾಡಿ ನೇಕಾರ ಸಂಘದ ಆಡಳಿತ ನಿರ್ದೇಶಕ ಮಾಧವ ಶೆಟ್ಟಿಗಾರ್ ಮತ್ತು ನೇಕಾರರು ಉಪಸ್ಥಿತರಿದ್ದರು.

See also  ಉಡುಪಿ ಜಿಲ್ಲೆಯ ಕಾರ್ಗಿಲ್ ಯೋಧ ಲಾನ್ಸ್‌ನಾಯಕ್ ಬಾಲಕೃಷ್ಣ ಟಿ. ಅವರಿಗೆ ರಾಜ್ಯ ಸರಕಾರದಿಂದ ಅನುದಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು