News Kannada
Wednesday, March 22 2023

ಉಡುಪಿ

ಕುಂದಾಪುರ: ಕೊಡೇರಿ ಸರಕಾರಿ ಶಾಲೆಗೆ ಬೆಂಗಳೂರಿನ ಸ್ಕೂಲ್‌ಬೆಲ್ ತಂಡದಿಂದ ಬಣ್ಣದ ಚಿತ್ತಾಾರ

ಸ್ಕೂಲ್‌ಬೆಲ್
Photo Credit : News Kannada

ಕುಂದಾಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆೆಲೆಯಲ್ಲಿ ರಾಜ್ಯದ 75 ಸರಕಾರಿ ಶಾಲೆಗೆ ಮೂಲಸೌಕರ್ಯ ಸಹಿತ ಸುಣ್ಣಬಣ್ಣ ಬಳಿಯುವ ಯೋಜನೆಯನ್ನು ಹಾಕಿಕೊಂಡಿರುವ ಬೆಂಗಳೂರಿನ ಕ್ಯಾಂಪಸ್ ಟು ಕಮ್ಯೂನಿಟಿ ಸಂಸ್ಥೆೆಯ ಸ್ಕೂಲ್‌ಬೆಲ್ ತಂಡದ ಸದಸ್ಯರು ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಾಮದ ಕೊಡೇರಿ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆಯ ಗೋಡೆಗಳಿಗೆ ನಾನಾ ಬಗೆಯ ಚಿತ್ರ ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಚಿತ್ರಕಲಾವಿದರು,ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಾರ್ಥಿಗಳು,ಚಿತ್ರಕಲಾ ಕಾಲೇಜಿನ ವಿದ್ಯಾರ್ಥಿಗಳು, ಐಟಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ಸೇರಿದಂತೆ ಸುಮಾರು 50 ಜನರ ತಂಡ ಕೊಡೇರಿ ಶಾಲೆಗೆ ಆಗಮಿಸಿ ಎರಡು ದಿನಗಳ ಕಾಲ ಅಲ್ಲಿಯೇ ವಾಸವಿದ್ದು ಶಾಲೆಯ ಗೋಡೆಗೆಗಳಿಗೆ,ಕೊಠಡಿಯ ಒಳಭಾಗದಲ್ಲಿ ವಿದ್ಯಾಾರ್ಥಿಗಳ ಕಲಿಕೆ,ಮನೋವಿಕಾಸಕ್ಕೆೆ ಪೂರಕವಾದ ಚಿತ್ರಗಳನ್ನು ಬಿಡಿಸಿದ್ದಾಾರೆ.

ಸಮುದ್ರದ ಅಲೆಯ ಜತೆಗೆ ಮೀನಿನ ಚಿತ್ತಾರ,ಹಂಪಿಯ ಕಲ್ಲಿನ ರಥ,ಬುಟ್ಟಿಯಲ್ಲಿ ಮೀನಿಟ್ಟುಕೊಂಡು ಮಾರಾಟ ಮಾಡುತ್ತಿರುವ ಮಹಿಳೆ ಚಿತ್ರ, ಭಾರತೀಯ ಸೇನೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್, ಕಂಬಳದ ದೃಶ್ಯ, ಯಕ್ಷಗಾನ, ಜಾನಪದ ಕಲಾಕೃತಿಗಳು,ಹಸಿರು ಪರಿಸರ ಹೀಗೆ ಹಲವು ಬಗೆಯ ಚಿತ್ರಗಳನ್ನು ಶಾಲೆಯೆ ಹೊರಗೋಡೆಗಳಲ್ಲಿ ಕಲಾವಿದರ ಕೈಚಳಕದಿಂದ ಮೂಡಿಬಂದಿದೆ.

ತರಗತಿ ಕೊಠಡಿಯ ಒಳಗೆ ಮಕ್ಕಳ ಕಲಿಕೆಗೆ ಅನುಕೂಲವಾಗುವ ಲೆಕ್ಕಗಳು, ಅಂಕಿ ಸಂಖ್ಯೆೆ,ಮಾನವನ ದೇಹರಚನೆ,ನಾನಾ ಬಗೆಯ ಹಣ್ಣುಗಳು,ಸೌರಮಂಡಲ ಹೀಗೆ ಹತ್ತಾರು ಚಿತ್ರಕಲೆಗಳನ್ನು ಕಾಣಬಹುದಾಗಿದೆ.

ಸ್ಕೂಲ್‌ಬೆಲ್ ಯೋಜನಾ ನಿರ್ದೇಶಕ ಮಹೇಶ್ ಕೃಷ್ಣಮೂರ್ತಿ,ಸಂಯೋಜಕ ಸಂದೇಶ್ ಎಸ್,ಸಹ ಸಂಯೋಜಕಿ ಅರ್ಚನಾ ನಾಗ್, ಆರ್ಟ್ ಮ್ಯಾಾಟರ್‌ಸ್‌ ಕಾರ್ಯಕ್ರಮ ಸಂಯೋಜಕರಾದ ವೈಷ್ಣವಿ, ಶಾರದಾ ಕೆ.ಎಸ್. ಮೊದಲಾದವರ ಮುಂದಾಳತ್ವದಲ್ಲಿ ಎರಡು ದಿನಗಳ ಕ್ಯಾಾಂಪ್ ನಡೆಯಿತು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು,ಸದಸ್ಯರು,ಹಳೇ ವಿದ್ಯಾಾರ್ಥಿಗಳ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು, ಹಳೇ ವಿದ್ಯಾಾರ್ಥಿಗಳು, ಊರಿನ ಸಾರ್ವಜನಿಕರು ಕ್ಯಾಂಪ್ ನಡೆಸಲು ಸಹಕರಿಸಿದರು.

See also  ಬೆಳ್ತಂಗಡಿ: ರೈತ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು