News Kannada
Thursday, March 23 2023

ಉಡುಪಿ

ಉಡುಪಿ: ಮಾಡಾಳ್ ರನ್ನು ಸಮರ್ಥಿಸುವ ಕೆಲಸ ಮಾಡಲ್ಲ, ಶಾಸಕ ರಘುಪತಿ ಭಟ್

Udupi: I will not defend MLA Madal Virupakshappa, says MLA Raghupathi Bhat
Photo Credit : News Kannada

ಉಡುಪಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಶಾಸಕ ಮಾಡಾಳ್ ಪುತ್ರನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷ ಯಾವುದೇ ಕಾರಣಕ್ಕೂ ಈ ಪ್ರಕರಣವನ್ನು ಸಮರ್ಥನೆ ಮಾಡುವುದಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ನಮ್ಮ ಸರಕಾರ ಲೋಕಾಯುಕ್ತಕ್ಕೆ ಎಷ್ಟು ಸ್ವಾಯತ್ತತೆ ನೀಡಿದೆ ಎಂಬುದು ಇದರಿಂದ ತಿಳಿಯುತ್ತದೆ. ಈ ಪ್ರಕರಣದಿಂದ ಜನರಿಗೆ ದೊಡ್ಡ ಸಂದೇಶ ಹೋದಂತಾಗಿದೆ ಎಂದರು.

ಈ ಪ್ರಕರಣದ ಪೂರ್ಣ ತನಿಖೆ ಇನ್ನಷ್ಟೇ ಆಗಬೇಕಿದೆ. ಏನಾದರೂ ಷಡ್ಯಂತ್ರಗಳಿದ್ದರೆ ಬಯಲಾಗಬೇಕು. ಸದ್ಯ ಸಿಕ್ಕಿ ಬಿದ್ದಿರುವುದು ಶಾಸಕರ ಮಗ. ಆದರೆ ಈ ಪ್ರಕರಣವನ್ನು ನಾವು ಯಾರೂ ಸಮರ್ಥನೆ ಮಾಡುವುದಿಲ್ಲ ಎಂದು ಹೇಳಿದರು.

ಲೋಕಾಯುಕ್ತದಲ್ಲಿ ಇರೋದು ಪೊಲೀಸ್ ಇಲಾಖೆಯ ಅಧಿಕಾರಿಗಳೇ. ಅವರು ರಾಜ್ಯ ಸರ್ಕಾರ ಗೃಹ ಸಚಿವರ ಅಧೀನದಲ್ಲಿ ಬರ್ತಾರೆ. ಸರಕಾರ ಮನಸ್ಸು ಮಾಡದ್ದಿದ್ದರೆ ಇದನ್ನು ಯಾವ ರೀತಿಯಲ್ಲೂ ತಪ್ಪಿಸಬಹುದಿತ್ತು. ಆದರೆ ಕೇಂದ್ರ ನಾಯಕತ್ವ ಮತ್ತು ಮುಖ್ಯಮಂತ್ರಿಗಳು ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದರು.

See also  ನಂಜನಗೂಡು: ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು