News Kannada
Sunday, June 04 2023
ಉಡುಪಿ

ತೆಲಂಗಾಣ ಉಸ್ತುವಾರಿಯಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆ ಸುರೈಯ್ಯ ಅಂಜುಮ್

Suraiya Anjum appointed as National Youth Congress spokesperson and Telangana in-charge
Photo Credit : News Kannada

ಉಡುಪಿ: ಉಡುಪಿ ಜಿಲ್ಲೆಯ ಸುರೈಯ್ಯ ಅಂಜುಮ್ ಎರಡನೇ ಬಾರಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆ ಹಾಗೂ ತೆಲಂಗಾಣ ರಾಜ್ಯದ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕರಾವಳಿಯ ಮೊದಲ ಅಲ್ಪಸಂಖ್ಯಾತ ಮಹಿಳೆ ಪತ್ರಕರ್ತೆ ಸುರೈಯ್ಯ ಅಂಜುಮ್ ದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಟಾಪ್ 3 ಸ್ಥಾನ ಅಲಂಕರಿಸಿದ್ದರು. ಹಳ್ಳಿಯಿಂದ ದೆಲ್ಲಿ ಎಂಬಂತೆ ನೇರವಾಗಿ ಭಾಷಣ ಸ್ಪರ್ಧೆ ಮೂಲಕ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆ ಹಾಗೂ ಕೇರಳ ರಾಜ್ಯದ ಸಹ ಉಸ್ತುವಾರಿಯಾಗಿ ನೇಮಕಗೊಂಡ ಸುರೈಯ್ಯ ಅಂಜುಮ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.

ಧರ್ಮಕ್ಕಿಂತ ದೇಶ ಮೊದಲು ಹೇಳಿಕೆ: ಹಿಜಾಬ್ ವಿಚಾರದಲ್ಲಿ ಶಿಕ್ಷಣ ನನ್ನ ಮೊದಲ ಆದ್ಯತೆ ಧರ್ಮಕ್ಕಿಂತ ದೇಶ ಮೊದಲು ಎಂದು ದಿಟ್ಟ ಹೇಳಿಕೆ ನೀಡಿ ಕರ್ನಾಟಕದ ರಾಜ್ಯದೆಲ್ಲೆಡೆ ಪಕ್ಷಾತೀತವಾಗಿ ಬೆನ್ನುತಟ್ಟಿಸಿಕೊಂಡು ಸದ್ದು ಮಾಡಿದ್ದರು. ಸರಿತಪ್ಪುಗಳ ತುಲನೆ, ತುಳುನಾಡ ಸಂಸ್ಕೃತಿ, ವಿರೋಧ ಪಕ್ಷದ ಹೇಳಿಕೆ ಆಡಳಿತ ಯಾವುದೇ ಇರಲಿ ಓಲೈಕೆ ಮಾಡದೆ ನೇರ ವಾಗ್ದಾಳಿ ಮಾಡಿ ಜನಮೆಚ್ಚುಗೆ ಪಡೆದ ಯುವ ನಾಯಕಿ ಎಂದರೆ ತಪ್ಪಾಗಲಾರದು.

ಸಂಪ್ರದಾಯಸ್ಥ ಕುಟುಂಬದ ಧೀರ ನಾಯಕಿ: ಪತ್ರಕರ್ತೆಯಾದ ಸುರೈಯ್ಯ ಅಂಜುಮ್ ಕಟ್ಟಾ ಸಂಪ್ರಾದಾಯ ಕುಟುಂಬಸ್ಥದಿಂದ ಬಂದವರು. ಬಾಲ್ಯದಲ್ಲೇ ಶಾಲಾ ಕಾಲೇಜುಗಳಲ್ಲಿ ಭಾಷಣ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮುಂದೆ ಇದ್ದ ಇವರು ಸಾಮಾಜಿಕವಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಪತ್ರಿಕೋದ್ಯಮವನ್ನು ಕುಟುಂಬಸ್ಥರ ವಿರೋಧದ ಮಧ್ಯೆಯು ಆಯ್ಕೆ ಮಾಡಿ ವಾರ್ತಾ ವಾಚಕಿ, ಪ್ಯಾನೆಲ್ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ನಂತರ ಇದೇ ಹಾದಿಯಿಂದ ಪತ್ರಿಕೋದ್ಯಮಕ್ಕೆ ರಾಜಕೀಯ ನೀಡಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ತಾವು ಸಕ್ರಾಇಯವಾಗಿ ತೊಡಗಿಸಿಕೊಂಡಿದ್ದಾರೆ.

ಸ್ಪಷ್ಟ ಕನ್ನಡ ದಿಟ್ಟ ಶೈಲಿ: ಸ್ಪಷ್ಟ ಕನ್ನಡ, ದಿಟ್ಟವಾಗಿ ಮಾತನಾಡುವ ಅಪರೂಪದ ಮಹಿಳಾ ರಾಜಕಾರಣಿಗಳ ಪಟ್ಟಿಯಲ್ಲಿ ಇವರು ಹೆಸರು ಮುಂಚೂಣಿಯಲ್ಲಿದೆ. ಒಟ್ಟಿನಲ್ಲಿ ಈ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಕುಟುಂಬ ಹಿನ್ನಲೆ ಇಲ್ಲದೆ ವಿದ್ಯಾವಂತ ರಾಜಕಾರಣಿಗಳ ಪ್ರವೇಶವಾಗುತ್ತಿರುವುದು ದೇಶದ ಸಮಗ್ರ ವಿಕಾಸನಕ್ಕೆ ಹಾದಿ ಎನ್ನುತ್ತಾರೆ ಹಲವರು.

See also  ವಿಜಯ ಸಂಕಲ್ಪ ಯಾತ್ರೆ, ಪ್ರಗತಿ ರಥ ಯಾತ್ರೆ, ಮೋರ್ಚಾಗಳ ಜಿಲ್ಲಾ ಮಟ್ಟದ ಸಮಾವೇಶಕ್ಕೆ ಬಿಜೆಪಿ ಸಜ್ಜು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು