News Kannada
Thursday, September 28 2023
ಉತ್ತರಕನ್ನಡ

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಭಾರಿ ಮಳೆ, ಬೈತಖೋಲ ಬಂದರಿನಲ್ಲಿ ಲಂಗರು ಹಾಕಿದ ಬೋಟುಗಳು

Heavy rains lash coastal areas of Karwar district: Boats anchored at Baithakhola port
Photo Credit : By Author

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸೂಚನೆ ಇರುವ ಕಾರಣದಿಂದ ಆರಂಭದಲ್ಲೇ ಆಳ ಸಮುದ್ರ ಮೀನುಗಾರಿಕೆ ನಿಂತಿದೆ. ಕಳೆದ ಕೆಲವೇ ದಿನದ ಹಿಂದೆ, ಜಿಲ್ಲೆಯಲ್ಲಿ ಆಳ ಸಮುದ್ರ ಮೀನುಗಾರಿಕೆ ಆರಂಭಗೊಂಡಿತ್ತು. ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿದ್ದ ಮೀನುಗಾರರು ಆರಂಭದಲ್ಲೇ ನಿರಾಸರಾಗಿದ್ದಾರೆ.

ಹವಾಮಾನ ವೈಪರಿತ್ಯದಿಂದಾಗಿ ಬೈತಖೋಲ ಬಂದರು ವ್ಯಾಪ್ತಿಯಲ್ಲಿ ಬೋಟುಗಳು ಲಂಗರು ಹಾಕಿವೆ. ಕಳೆದ ಎರಡು ವರ್ಷಗಳಿಂದ ಕೊರೊನಾ, ಹವಾಮಾನ ವೈಪರಿತ್ಯದಿಂದಾಗಿ ಆರಂಭದಲ್ಲಿ ಸರಿಯಾಗಿ ಮೀನುಗಾರಿಕೆ ನಡೆದಿರಲಿಲ್ಲ. ಆದರೆ ಈ ಭಾರಿ ಉತ್ತಮ ಮೀನುಗಾರಿಕೆ ನಿರೀಕ್ಷೆ ಹೋದಿದ್ದ ಬೋಟ್ ಮಾಲಿಕರುಗಳು ಜುಲೈ ಅಂತ್ಯದ ವೇಳೆಗೆ ಬೋಟ್, ಬಲೆ ದುರಸ್ಥಿಗೊಳಿಸಿಕೊಂಡಿದ್ದರು.

ಅಲ್ಲದೆ ೩೦ಕ್ಕೂ ಹೆಚ್ಚು ಬೋಟ್‌ಗಳು ಮೀನುಗಾರಿಕೆಗೂ ತೆರಳಿದ್ದವು. ಆದರೆ ಹವಮಾನ ವೈಪರಿತ್ಯದಿಂದ ವಾಪಸ್ಸ್ ಬಂದ ಬೋಟ್‌ಗಳು ಕಳೆದೊಂದು ವಾರದಿಂದ ಲಂಗರು ಹಾಕಿವೆ. ಮಳೆಗಾಲದ ನಿಷೇಧದ ಅವಧಿ ಜು.31ಕ್ಕೆ ಮುಕ್ತಾಯವಾಗಿದ್ದು ಮಾರನೇ ದಿನವೇ ಮೀನುಗಾರಿಕೆ ಕೂಡ ಆರಂಭಗೊಂಡಿತ್ತು. ಆದರೆ ಹವಮಾನ ವೈಪರಿತ್ಯದಿಂದಾಗಿ ಒಂದೇ ದಿನಕ್ಕೆ ಮೀನುಗಾರಿಕೆಗೆ ತೆರಳಿದ ಬೋಟ್‌ಗಳು ಬರಿಗೈಲ್ಲಿ ವಾಪಸ್ಸ್ ಆಗಿವೆ.

ಹವಾಮಾನ ಇಲಾಖೆ ಆ. 11ರ ವರೆಗೆ ಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಿರುವ ಹಿನ್ನಲೆ ಜಿಲ್ಲೆಯ ಕರಾವಳಿಯಲ್ಲಿ ಎಲ್ಲ ಬೋಟ್‌ಗಳು ಲಂಗರು ಹಾಕಿಕೊಂಡಿವೆ.

See also  ಮಾಜಾಳಿ ಕಡಲತೀರದಲ್ಲಿ ಟೈಗರ್ ಶಾರ್ಕ್ ಕಳೇಬರ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು