News Kannada
Saturday, September 30 2023
ಉತ್ತರಕನ್ನಡ

ಗೋಕರ್ಣ: ಸಮಸ್ಯೆ, ಸವಾಲುಗಳು ಜೀವನದ ಅವಕಾಶಗಳು ಎಂದ ರಾಘವೇಶ್ವರ ಶ್ರೀ

Problems, challenges are life's opportunities, says Raghaveshwara Sri
Photo Credit : Facebook

ಗೋಕರ್ಣ: ಸಮಸ್ಯೆಗಳು,ಸವಾಲುಗಳು ಬಂದಾಗ ಧೃತಿಗೆಡದೆ ಅವುಗಳನ್ನುಅವಕಾಶಗಳಾಗಿ ಪರಿವರ್ತಿಸಿಕೊಳ್ಳಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಧನಾತ್ಮಕ ದೃಷ್ಟಿ ಇದ್ದರೆ ಅಂಥ ಸವಾಲುಗಳು ನಮ್ಮ ಪಾಲಿಗೆ ಭಾಗ್ಯವಾಗಿ ಪರಿವರ್ತನೆಯಾಗುತ್ತದೆ. ಋಣಾತ್ಮಕ ದೃಷ್ಟಿ ಇದ್ದರೆ ಇದು ಸಂಕಟವಾಗಿ ಪರಿಣಮಿಸುತ್ತದೆ ಎಂದು ವಿಶ್ಲೇಷಿಸಿದರು.

ಹಲವು ಮಹಾಪುರುಷರು ಇಂಥ ಸವಾಲುಗಳನ್ನು ಎದುರಿಸಿ ಗೆದ್ದ ಕಾರಣದಿಂದಲೇ ಮಹಾತ್ಮರು ಎನಿಸಿಕೊಂಡಿದ್ದಾರೆ ಎಂದು ನುಡಿದರು,.ಜೀವನದ ಹಾದಿಯಲ್ಲಿ ಮುನ್ನಡೆಯುವಾಗ ಸಮಾಜ ಹೂ ಎರಚುತ್ತದೆ ಎಂಬ ನಿರೀಕ್ಷೆ ಬೇಡ; ಜನ ನಮ್ಮೆಡೆಗೆ ಕಲ್ಲು ತೂರುತ್ತಾರೆ ಎಂಬ ಭಾವನೆಯಿಂದ ಧೈರ್ಯವಾಗಿ ಎದುರಿಸಿ. ತೂರಿದ ಕಲ್ಲೇ ನಮ್ಮ ಬದುಕಿನ ಭವ್ಯ ಭವನಗಳಿಗೆ ಸೋಪಾನವಾಗಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಜನಸಾಮಾನ್ಯರು ಮಾತ್ರವಲ್ಲದೇ ರಾಜನಾದವನಿಗೆ ವಿಶೇಷ ದೃಷ್ಟಿ ಬೇಕು.ಒಳನೋಟ,ದೂರದೃಷ್ಟಿ ಅಗತ್ಯ ಎಂದು ವಿವರಿಸಿದರು.

See also  ಲಕ್ನೋ: ಅಪ್ನಾ ದಳ (ಎಸ್)ವನ್ನು ರಾಜ್ಯ ಮಟ್ಟದ ಪಕ್ಷವೆಂದು ಮಾನ್ಯ ಮಾಡಿದ ಚುನಾವಣಾ ಆಯೋಗ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು