News Kannada
Saturday, April 01 2023

ಉತ್ತರಕನ್ನಡ

ಕಾರವಾರ: ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Students protest at boys' hostel
Photo Credit : News Kannada

ಕಾರವಾರ: ಕಾರವಾರದ ನಗರದ ಬಾಡದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಊಟ ಸರಿಯಿಲ್ಲ ಎಂದು ಕೆಲ ವಿದ್ಯಾರ್ಥಿಗಳು ಪ್ರತಿಭಟಣೆ ನಡೆಸಿದರು.

ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಇರುವ ವಸತಿ ನಿಲಯವಾಗಿದ್ದು, ಮೀನನ್ನು ಸರಿಯಾಗಿ ಸ್ವಚ್ಛ ಮಾಡುವುದಿಲ್ಲ. ಸಾಂಬಾರ ಮಾಡಿದರೆ ಮಸಾಲೆಯನ್ನು ಸರಿಯಾಗಿ ಹಾಕುವುದಿಲ್ಲ. ಶೌಚಾಲಯವನ್ನು ಸ್ವಚ್ಛ ಮಾಡುವುದಿಲ್ಲ ಎಂದು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಲಗದ್, ಅರ್ಧಗಂಟೆಗೂ ಅಧಿಕ ಕಾಲ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಬಳಿಕ ವಸತಿ ನಿಲಯ ಪರಿಶೀಲನೆ ನಡೆಸಿದರು. ಗುಣಮಟ್ಟದ ಆಹಾರ ನೀಡುವಂತೆ, ಸ್ವಚ್ಛತೆಯನ್ನ ಮಾಡುವಂತೆ ವಾರ್ಡನ್‌ಗೆ ಸೂಚಿಸಿದರು.

ಅಡುಗೆ ಸಹಾಯಕ ಹಾಗೂ ಸೆಕ್ಯುರಿಟಿ ಗಾರ್ಡ್ ಅವರ ಬೇಜವಾಬ್ದಾರಿ ಬಗ್ಗೆ ಮಕ್ಕಳು ದೂರಿದರು. ತಾವು ಧಿಡೀರ್ ಆಗಿ ಬಂದು ಪರಿಶೀಲನೆ ಮಾಡಿ ಅವರು ತಪ್ಪು ಮಾಡಿರುವುದು ಗಮನಕ್ಕೆ ಬಂದರೆ ಕೆಲಸದಿಂದ ವಜಾ ಮಾಡುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

See also  ಕಾರವಾರ: ನೋಂದಣಾಧಿಕಾರಿಗಳು ತಪ್ಪಾಗದ ರೀತಿಯಲ್ಲಿ ಜವಾಬ್ದಾರಿ ವಹಿಸಬೇಕು- ಡಿಸಿ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು