News Kannada
Saturday, April 01 2023

ಉತ್ತರಕನ್ನಡ

ಕಾರವಾರ: ಉಪ್ಪು ನೀರಿನಿಂದ ಸಮಸ್ಯೆ, ಕಾಂಕ್ರೀಟ್‌ ಹಾಕಿ ಗೇಟ್ ಬಂದ್ ಮಾಡಿದ ಗ್ರಾಮಸ್ಥರು

Villagers block gate with concrete over salt water
Photo Credit : By Author

ಕಾರವಾರ: ಖಾಸಗಿ ಜಮೀನಿನಲ್ಲಿ ಉಪ್ಪು ನೀರು ಸಂಗ್ರಹಿಸುತ್ತಿರುವುದರಿಂದ ಊರಿಗೆಲ್ಲ ಆಗುತ್ತಿರುವ ಸಮಸ್ಯೆಯನ್ನು ನೀಗಿಸಲು ಸ್ವತಃ ಗ್ರಾಮಸ್ಥರು ಕಾಂಕ್ರಿಟ್ ಹಾಕಿ ಗೇಟ್ ಬಂದ್ ಮಾಡಿದ ಘಟನೆ ತಾಲೂಕಿನ ಚಿತ್ತಾಕುಲಾ ಗ್ರಾಪಂ ವ್ಯಾಪ್ತಿಯ ಕಣಸಗಿರಿಯಲ್ಲಿ ನಡೆಯಿತು.

ತಾಲೂಕಿನ ಚಿತ್ತಾಕುಲಾ ಕಣಸಗಿರಿಯ ಸರ್ವೇ ನಂಬರ್ 21ರಲ್ಲಿ 111 ಎಕರೆ ಜಮೀನಿಗೆ ಕಾಳಿ ನದಿಯಲ್ಲಿ ಬರುವ ಉಪ್ಪುನೀರನ್ನು ಒಳಗೆ ತಡೆಯುವ ಗೇಟ್ ಎದುರು ಸೇರಿದ 50 ಕ್ಕೂ ಅಧಿಕ ಜನರು ಘೋಷಣೆಗಳನ್ನು ಕೂಗಿದರು. ನಂತರ ಪ್ರಮುಖ ಗಜೇಂದ್ರ ನಾಯ್ಕ ನೇತೃತ್ವದಲ್ಲಿ ಕಾಂಕ್ರಿಟ್ ಮಿಕ್ಷರ್ ಯಂತ್ರವನ್ನು ತಂದ ಗ್ರಾಮಸ್ಥರು ಗೇಟನ್ನು ಬಂದ್ ಮಾಡಿದರು.

ವಿವೇಕ ವೆಂಕಟರಾಯ ನಾಡಕರ್ಣಿ ಅವರ ಹೆಸರಿನ ಜಮೀನಿನಲ್ಲಿ ಕೆನರಾ ಮಷಿನರಿ ಸರ್ಚ್ವರ್ಕ್ ಎಂಬ ಕಂಪನಿಯಿಂದ ಈ ಹಿಂದೆ ಉಪ್ಪು ತಯಾರಿಸಲಾಗುತ್ತಿತ್ತು. ಆಗ ಅಲ್ಪ ನೀರು ಪಡೆದು ನಿಲ್ಲಿಸುವುದರಿಂದ ಸಮಸ್ಯೆ ಇರಲಿಲ್ಲ. ಈಗ ಏಳೆಂಟು ವರ್ಷಗಳಿಂದ ಉಪ್ಪು ಬೆಳೆಯುವುದನ್ನು ಬಂದ್ ಮಾಡಲಾಗಿತ್ತು. ಆದರೆ, ಉಬ್ಬರದ ಸಮಯದಲ್ಲಿ ಮೂರ್ನಾಲ್ಕು ಅಡಿ ನೀರನ್ನು ಗೇಟ್ ಮೂಲಕ ಒಳಗೆ ಪಡೆದು ನಿಲ್ಲಿಸಲಾಗುತ್ತಿತ್ತು.

ಅದರ ಜತೆ ಬರುವ ಮೀನುಗಳನ್ನು ಹಿಡಿಯುವ ಕಾರ್ಯ ಮಾಡಲಾಗುತ್ತಿತ್ತು. ಇದರಿಂದ ಆ ಜಮೀನಿನ ಸುತ್ತಲೂ ಇರುವ 152 ಮನೆಗಳ ಬಾವಿಗಳ ನೀರು ಉಪ್ಪಾಗುತ್ತಿತ್ತು. ಮಾತ್ರವಲ್ಲ ಅಕ್ಕಪಕ್ಕದ ಜಮೀನುಗಳಿಗೂ ಉಪ್ಪು ನೀರು ನುಗ್ಗುತ್ತಿತ್ತು. ಇದರಿಂದ ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತಿದೆ ಎಂಬುದು ಗ್ರಾಮಸ್ಥರ ದೂರು. ಈ ಬಗ್ಗೆ ಗ್ರಾಪಂಗೆ ಹಲವು ಬಾರಿ ದೂರು ನೀಡಿದರೂ ಕ್ರಮವಾಗಿರಲಿಲ್ಲ.

ಈ ರೀತಿ ಮೀನು ಹಿಡಿಯಲು ಸಂಬಂಧಪಟ್ಟ ಯಾವುದೇ ಇಲಾಖೆಯಿಂದ ಅನುಮತಿಯನ್ನೂ ಪಡೆದಿಲ್ಲ ಎಂದು ಗ್ರಾಮಸ್ಥರು ಇತ್ತೀಚೆಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಅದರಂತೆ ತಹಸೀಲ್ದಾರರು ಸ್ಥಳ ಪರಿಶೀಲನೆ ನಡೆಸಿ ಇಲ್ಲಿ ಅಕ್ರಮವಾಗಿ ಉಪ್ಪು ನೀರು ಸಂಗ್ರಹಿಸುವ ಕಾರ್ಯವಾಗುತ್ತಿದೆ ಎಂದು ವರದಿ ನೀಡಿದ್ದರು. ಆದರೆ, ಯಾವುದೇ ಕ್ರಮವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ವತಃ ಕಾರ್ಯಾಚರಣೆ ನಡೆಸಿದರು. ಚಿತ್ತಾಕುಲಾ ಠಾಣೆ ಪೊಲೀಸರು ಭದ್ರತೆ ಒದಗಿಸಿದ್ದರು.

See also  ಕಾರವಾರ: ಕೂರ್ಮಗಡ ಜಾತ್ರೆ ವೇಳೆ ಸುರಕ್ಷತಾ ಕ್ರಮಕೈಗೊಳ್ಳಲು ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು