News Kannada
Tuesday, March 21 2023

ಚಿಕಮಗಳೂರು

ಚಿಕ್ಕಮಗಳೂರು: ಅಭಿವೃದ್ಧಿ ಹೆಸರಿನಲ್ಲಿ ತುಘಲಕ್ ದರ್ಬಾರ್

Tughlaq Darbar in the name of development
Photo Credit : News Kannada

ಚಿಕ್ಕಮಗಳೂರು: ಸೌಂದರ್ಯೀಕರಣದ ಹೆಸರಲ್ಲಿ ಬಸವನಹಳ್ಳಿ ಕೆರೆಮುಚ್ಚಿ, ತೋಟಗಾರಿಕೆ ಇಲಾಖೆ ಗಿಡ, ಮರ ಕಡಿದು ಜಿಲ್ಲಾ ಸಂಕೀರ್ಣ ಮಾಡಲು ಹೊರಟಿರುವ ಶಾಸಕರು ಅಭಿವೃದ್ಧಿ ಹೆಸರಲ್ಲಿ ತೊಗಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಟೀಕಿಸಿದರು.

ಜಿಲ್ಲಾ ಸಂಕೀರ್ಣ ನಿರ್ಮಿಸಲು ದಂಟರಮಕ್ಕಿಯಲ್ಲಿರುವ ತೋಟಗಾ ರಿಕೆ ಇಲಾಖೆಯಲ್ಲಿನ ವಿವಿಧ ಜಾತಿಯ ೧೩೫೦ ಮರಗಳನ್ನು ಕಡಿದು ರುಳಿಸಲಾಗುತ್ತಿದೆ. ಸಪೋಟ, ಮಾವು, ತೆಂಗು, ಹಲಸು, ನೆಲ್ಲಿ, ಪನ್ನೇರಲು ಮತ್ತಿತರೆ ಅನೇಕ ಜಾತಿಯ ಮರ ಗಳು ಇಲ್ಲಿ ಹತ್ತಾರು ವರ್ಷಗಳಿಂದ ಬೆಳೆಸಿದ್ದು ಇದರಿಂದ ರೈತರಿಗೆ ಕಸಿ ಮಾಡಿದ ಸಸಿಗಳು ಸಿಗುತ್ತಿದ್ದವು. ಮತ್ತೆ ಅಂತಹ ಸಸ್ಯ ಕ್ಷೇತ್ರ ಮಾಡಲು ಸದ್ಯ ದಲ್ಲಿ ಸಾಧ್ಯವೇ ಎಂದು ಪ್ರಶ್ನಿಸಿದರು.

ಈ ಹಿಂದೆ ಕುರುವಂಗಿ ರಸ್ತೆ ಯಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಿ ಸಲು ಜಾಗ ಗುರುತಿಸಿ ೫ ಕೋಟಿ ರೂ ವೆಚ್ಚದ ಕಾಮಗಾರಿಯೂ ನಡೆದಿದೆ. ಜಾಗ ನೀಡಿದ್ದ ರೈತರು ನ್ಯಾಯಾಲಯದ ಮೊರೆ ಹೋದರು. ಜಾಗ ಗುರುತು ಮಾಡುವಾಗ ಶಾಸಕ, ಅಧಿಕಾರಿಗಳಿಗೆ ಸಂಭವನೀಯ ಸಮಸ್ಯೆಯ ಅರಿವಿರಲಿಲ್ಲವೇ ಎಂದು ಪ್ರಶ್ನಿಸಿ ಈ ಸಮಸ್ಯೆಯನ್ನು ರೈತ ರೊಂದಿಗೆ ಚರ್ಚಿಸಿ ಪರಿಹರಿಸಬಹು ದಿತ್ತು. ಆದರೆ, ಆ ಕೆಲಸ ಮಾಡದೆ ರೈತರ ಜೀವನಾಡಿಯಾಗಿದ್ದ ತೋಟ ಗಾರಿಕೆ ಇಲಾಖೆಯ ಸಸ್ಯಕ್ಷೇತ್ರವನ್ನೇ ನಿರ್ನಾಮ ಮಾಡಲು ಹೊರಟಿ ದ್ದಾರೆ. ಈ ಕ್ರಮ ಮತ ಹಾಕಿದ ರೈತರಿಗೆ ಶಾಸಕರು ಮಾಡಿದ ಅನ್ಯಾ ಯವಾಗಿದೆ ಎಂದು ದೂರಿದರು.

ತೋಟಗಾರಿಕೆ ಇಲಾಖೆಗೆ ಇಂದಾವರದ ಬಳಿ ಬದಲಿ ಜಾಗ ಕೊಡುವುದಾಗಿ ಮೌಖಿಕವಾಗಿ ಹೇಳಿ ದ್ದಾರೆ ಅದು ಕಾರ್ಯಗತವಾಗಿಲ್ಲ. ಈಗಿರುವ ತೋಟಗಾರಿಕೆ ಇಲಾಖೆ ಸಸ್ಯಕ್ಷೇತ್ರವನ್ನು ಇನ್ನೊಂದು ಇಲಾಖೆ ಗೆ ಬಿಟ್ಟುಕೊಡಲು ಜಿಲ್ಲಾ ಪಂಚಾ ಯಿತಿಯಲ್ಲಿ ನಿರ್ಣಯ ಕೈಗೊಳ್ಳಬೇ ಕು. ಈ ಸಂಬಂಧ ಯಾವ ಪ್ರಕ್ರಿಯೆ ನಡೆದಿದೆ ಎಂಬುದನ್ನು ಜಿಲ್ಲಾ ಪಂ ಚಾಯಿತಿ ಸಿಇಒ ಅವರು ಸ್ಪಷ್ಟಪಡಿ ಸಬೇಕು ಎಂದು ಒತ್ತಾಯಿಸಿದರು.

ಮರ ಹನನ ಮಾಡಲು ಹೊರಟಿ ರುವ ಶಾಸಕರು ಕಳೆದ ೨೦ ವರ್ಷದಲ್ಲಿ ಎಷ್ಟು ಮರ ಬೆಳೆಸಿದ್ದಾರೆ.ಪ್ರಕೃತಿ ಉಳಿ ವಿಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿ ರೈತರು ಮತ್ತು ಸರಕಾರಕ್ಕೆ ಆಗಿರುವ ನಷ್ಟ ಭರ್ತಿ ಮಾಡುವವರು ಯಾರು ಎಂದು ಶಾಸಕರು ಹೇಳ ಬೇಕು ಎಂದರು. ಮುಖಂಡರಾದ ಬಸವ ರಾಜು, ಎನ್.ಡಿ.ಚಂದ್ರಪ್ಪ, ಜಯರಾ ಜಅರಸ್,ಸಿದ್ದೇಶ್‌ಗೋಷ್ಠಿಯಲ್ಲಿದ್ದರು.

See also  ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪರೂಪದ ಕಾವಿ ಕಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು