News Kannada
Tuesday, March 28 2023

ಮೈಸೂರು

ಚುನಾವಣೆ ಅಕ್ರಮದಲ್ಲಿ ಯಡಿಯೂರಪ್ಪನವರಿಗೆ ಡಾಕ್ಟರೆಟ್ ನೀಡಬಹುದು: ಸಿಎಂ ಸಿದ್ದರಾಮಯ್ಯ

Photo Credit :

ಚುನಾವಣೆ ಅಕ್ರಮದಲ್ಲಿ ಯಡಿಯೂರಪ್ಪನವರಿಗೆ ಡಾಕ್ಟರೆಟ್ ನೀಡಬಹುದು: ಸಿಎಂ ಸಿದ್ದರಾಮಯ್ಯ

ಮೈಸೂರು: ಯಾರಿಗಾದರೂ ಚುನಾವಣೆ ಅಕ್ರಮಗಳಲ್ಲಿ ಡಾಕ್ಟರೇಟ್ ನೀಡುವುದಿದ್ದರೇ ಅದನ್ನ ಯಡಿಯೂರಪ್ಪನವರಿಗೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ನಂಜನಗೂಡಿನಲ್ಲಿ ಯಡಿಯೂರಪ್ಪನವರಿಗೆ ತಿರುಗೇಟು ನೀಡಿದ್ದಾರೆ.

ನಿನ್ನೆ ಕಾಂಗ್ರೆಸ್ ನವರು ಚುನಾವಣಾ ಅಕ್ರಮ ನಡೆಸುತ್ತಿದ್ದಾರೆ ಎಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ ಹಿನ್ನಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಬಿಜೆಪಿಯವರು ಸೋಲಿನ ಹತಾಷೆಯಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು ಇದರಲ್ಲಿ ಯಾವುದೇ ಹುರುಳಿಲ್ಲ. ಪೊಲೀಸರು ನನ್ನ ವಾಹನವನ್ನು ಸಹ ತಪಾಸಣೆ ಮಾಡುತ್ತಿದ್ದಾರೆ. ಇನ್ನೂ ಪೊಲೀಸ್ ವಾಹನಗಳಲ್ಲಿ ಹಣ ಸಾಗಿಸಲು ಸಾಧ್ಯವಿಲ್ಲ. ಏನಿದ್ದರೂ ಬಿಜೆಪಿಯವರ ಇದು ಕೆಲಸ. ಚುನಾವಣಾ ಅಕ್ರಮದಲ್ಲಿ ಯಾರಿಗಾದರೂ ಡಾಕ್ಟರೆಟ್ ನೀಡುವುದಿದ್ದರೆ ಅದನ್ನು ಯಡಿಯೂರಪ್ಪನರಿಗೆ ನೀಡಬೇಕೆಂದು ತಿರುಗೇಟು ನೀಡಿದರು.

ಇನ್ನೂ ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ನೀಡುವಂತೆ ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಬೆಂಬಲ ನೀಡುವ ವಿಶ್ವಾಸವಿದೆ ಎಂದರು.

ಇನ್ನೂ ಮದ್ಯಾಹ್ನ 2 ಗಂಟೆಗೆ ನಂಜಗೂಡಿನ ಮುದ್ದಳ್ಳಿ, ನವೀಲೂರು, ಸೂರಳ್ಳಿ, ಕಸುವಿನಹಳ್ಳಿ, ಹಲ್ಲರೆ, ಹಂಬಾಳೆ, ಅಂಗನವಾಳು, ಮಾದಪುರ ಹಾಗೂ ಹೂರ ಗ್ರಾಮಗಳಲ್ಲಿ ರೋಡ್ ಷೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಪರ ಸಿಎಂ ಸಿದ್ದರಾಮಯ್ಯ ಮತಯಾಚನೆ ಮಾಡಿದರು.

See also  ವಾಹನಗಳ ಹಾರನ್ ಕೇಳಿದರೆ ವ್ಯಘ್ರವಾಗುವ ಭೀಮ..ದಸರಾಕ್ಕೆ ಬರುತ್ತಿದ್ದಾನೆ.. ಮುಂದೇನು?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು