News Kannada
Thursday, March 30 2023

ಮೈಸೂರು

ಅಹಿತಕರ ಘಟನೆಗಳು ನಡೆಯದಂತೆ ತಡೆಯುವಲ್ಲಿ ಯಶಸ್ವಿಯಾದ ರವಿ.ಡಿ.ಚನ್ನಣ್ಣನವರ್ ನೇತೃತ್ವದ ತಂಡ

Photo Credit :

ಅಹಿತಕರ ಘಟನೆಗಳು ನಡೆಯದಂತೆ ತಡೆಯುವಲ್ಲಿ ಯಶಸ್ವಿಯಾದ ರವಿ.ಡಿ.ಚನ್ನಣ್ಣನವರ್ ನೇತೃತ್ವದ ತಂಡ

ಮೈಸೂರು: ಎಲ್ಲಿ ಏನಾಗುತ್ತೋ ಈ ಬಾರಿಯ ಚುನಾವಣೆಯಲ್ಲಿ ಎಂದು ಎಲ್ಲರ ಚಿತ್ತ ನಂಜನಗೂಡು ಗುಂಡ್ಲುಪೇಟೆ ಅತ್ತ ಇತ್ತು. ಪ್ರತಿಷ್ಠೆಯ ಕಣವಾಗಿದ್ದ ನಂಜನಗೂಡಿನಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದು, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಂಜನಗೂಡು ಚುನಾವಣಾ ಹಿನ್ನೆಲೆಯಲ್ಲಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ನ್ನು ರವಿ ಡಿ.ಚನ್ನಣ್ಣನವರ್ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು. ಓರ್ವ ಎಸ್ಪಿ ಓರ್ವ ಅಡಿಶನಲ್ ಎಸ್ಪಿ, ಐವರು ಡಿವೈಎಸ್ಪಿಗಳು, 15 ಸರ್ಕಲ್ ಇನ್ಸಪೆಕ್ಟರ್ ಗಳು, 56 ಸಬ್ ಇನ್ಸಪೆಕ್ಟರ್ ಗಳು, 167 ಎಎಸ್ ಐ ಗಳು, 409 ಹೆಡ್ ಕಾನ್ಸ್ ಟೇಬಲ್ ಗಳು, 423 ಕಾನ್ಸ್ ಟೇಬಲ್ ಗಳು ಹಾಗೂ 210 ಹೋಂಗಾರ್ಡ್ ಗಳನ್ನು ನಿಯೋಜಿಸಲಾಗಿತ್ತು.

ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಸಿವಿಲ್ ಪೊಲೀಸ್ ಸಿಬ್ಬಂದಿಗಳನ್ನು, ಅವರ ಜೊತೆ ಹೆಚ್ಚುವರಿ ಅರೆ ಮೀಸಲು ಪಡೆ ಪೊಲೀಸರನ್ನು ನೇಮಿಸಿ ಕಟ್ಟೆಚ್ಚರ ವಹಿಸಿದ್ದರಿಂದ ಶಾಂತಿಯುತ ಮತದಾನ ಸಾಧ್ಯವಾಯಿತು. ಪಾರದರ್ಶಕ ಮತ್ತು ನ್ಯಾಯ ಸಮ್ಮತ ಮತದಾನಕ್ಕೆ ನಂಜನಗೂಡು ವಿಧಾನ ಸಭಾ ಕ್ಷೇತ್ರಾದ್ಯಂತ ಸೂಕ್ತ ಭದ್ರತೆ ಕಲ್ಪಿಸಲಾಗಿತ್ತು. ಎಲ್ಲ ಪೊಲೀಸ್ ಸಿಬ್ಬಂದಿಗಳ ಸಹಕಾರದಿಂದ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವುದು ಸಾಧ್ಯವಾಯಿತು  ಎಂದರು.

ಈ ಬಾರಿಯ ಎರಡೂ ಕ್ಷೇತ್ರದಲ್ಲಿಯೂ ಚುನಾವಣೆ ಮುಕ್ತಾಯಗೊಂಡಿದ್ದು, ಮತದಾರರು ಯಾರ ಕೈ ಹಿಡಿತುತ್ತಾರೂ ಎಂಬುದನ್ನು ಈ ಫಲಿತಾಂಶ ಮೂಲಕ ಮಾಹಿತಿ ಹೊರಬೀಳಲಿದೆ.

 

See also  ತಂದೆಯೊಂದಿಗೆ ಹೇಮಾವತಿ ನದಿಯಲ್ಲಿ ಕೊಚ್ಚಿ ಹೋದ ಮಗು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು