News Kannada
Sunday, March 26 2023

ಮೈಸೂರು

ರಾಮ-ಪ್ರೇಮ ಪ್ರಕರಣ:ಎರಡು ಪ್ರಕರಣಗಳನ್ನ ಒಂದೇ ಕೋರ್ಟ್ ನಲ್ಲಿ ವಿಚಾರಣೆಗೆ ಆದೇಶ

Photo Credit :

ರಾಮ-ಪ್ರೇಮ ಪ್ರಕರಣ:ಎರಡು ಪ್ರಕರಣಗಳನ್ನ ಒಂದೇ ಕೋರ್ಟ್ ನಲ್ಲಿ ವಿಚಾರಣೆಗೆ ಆದೇಶ

ಮೈಸೂರು: ಮಾಜಿ ಸಚಿವ ಎಸ್.ಎ ರಾಮದಾಸ್ ಮತ್ತು ಪ್ರೇಮಕುಮಾರಿ ನಡುವಿನ ಆರು ಪ್ರಕರಣಗಳಲ್ಲಿ ಎರಡು ಪ್ರಕರಣಗಳನ್ನ ಒಂದೇ ಕೋರ್ಟ್ ನಲ್ಲಿ ನಡೆಸುವಂತೆ ನಗರದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲವೂ ಆದೇಶ ನೀಡಿದೆ.

ರಾಮದಾಸ್ ಹಾಗೂ ಪ್ರೇಮಕುಮಾರಿ ನಡುವಿನ ಪ್ರೇಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ಪ್ರಕರಣಗಳು ವಿವಿಧ ನ್ಯಾಯಾಗಳಲ್ಲಿ ವಿಚಾರಣೆ ಹಂತದಲ್ಲಿದ್ದು, ಎಲ್ಲಾ ಪ್ರಕರಣಗಳು ಇಬ್ಬರು ವ್ಯಕ್ತಿಗೆ ಸಂಬಂದಿಸಿದರಿಂದ ಒಂದೇ ಕೋರ್ಟ್ ನಲ್ಲಿ ನಡೆಸಬೇಕೆಂದು ಪ್ರೇಮಕುಮಾರಿ ಪರ ವಕೀಲ ಅಮೃತೇಶ್ ಮೈಸೂರಿನ ನ್ಯಾಯಾಲಯಲದಲ್ಲಿ ಅರ್ಜಿ ಸಲ್ಲಿಸಿದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಧೀಶರಾದ ಪಿ.ಜಿ.ಎಂ ಪಾಟೀಲ್ ಆರು ಪ್ರಕರಣಗಳಲ್ಲಿ ಎರಡು ಪ್ರಕರಣಗಳನ್ನ ಒಂದೇ ಕೋರ್ಟ್ ನಲ್ಲಿ ನಡೆಸುವಂತೆ ಆದೇಶ ನೀಡಿದ್ದು, ಉಳಿದ  ನಾಲ್ಕು ಪ್ರಕರಣಗಳು ಆಯಾ ಕೋರ್ಟ್ ನಲ್ಲಿ ನಡೆಯಲಿದೆ ಎಂದರು.

ಹೈಕೋರ್ಟ್ ಗೆ ಅರ್ಜಿ:

ಮೈಸೂರು ನ್ಯಾಯಲಯವೂ ಎರಡು ಪ್ರಕರಣಗಳನ್ನ ಮಾತ್ರ ಒಂದೇ ಕೋರ್ಟ್ ನಲ್ಲಿ ವಿಚಾರಣೆ ನಡೆಸುವಂತೆ ನೀಡಿರುವ ತೀರ್ಪನ್ನು ಪ್ರಶ್ನಿಸಿ, ಜೊತೆಗೆ ಆರು ಪ್ರಕರಣಗಳನ್ನ ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಹೈಕೋರ್ಟ್ ನಲ್ಲಿ ಮೇಲರ್ಜಿ ಸಲ್ಲಿಸಲು ಸಿದ್ದತೆ ಮಾಡಿಕೊಂಡಿರುವುದಾಗಿ ವಕೀಲ ಅಮೃತೇಶ್ ತಿಳಿಸಿದ್ದಾರೆ.

 

See also  ಮೈಸೂರು ವಿಶ್ವ ವಿದ್ಯಾನಿಲಯವು ತಡೆಹಿಡಿದಿರುವ ಫಲಿತಾಂಶ ಪ್ರಕಟಿಸುವಂತೆ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು