News Kannada
Saturday, March 25 2023

ಚಾಮರಾಜನಗರ

ಅಂಕಹಳ್ಳಿ ಡಿಕ್ಕಿ ಸಿದ್ದಯ್ಯ ಮುಡಿಗೆ ಲೋಕ ಸಿರಿ ಪ್ರಶಸ್ತಿ

Photo Credit :

ಚಾಮರಾಜನಗರ: ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ನೀಡುವ ನಾಡೋಜ ಡಾ. ಹೆಚ್.ಎಲ್.ನಾಗೇಗೌಡ ನೆನಪಿನ ಪ್ರಶಸ್ತಿಗೆ ಜಿಲ್ಲೆಯ ಜಾನಪದ ಕಲಾವಿದ ಅಂಕಹಳ್ಳಿ ಡಿಕ್ಕಿ ಸಿದ್ದಯ್ಯ ಆಯ್ಕೆಯಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಂಕ ಹಳ್ಳಿ ಗ್ರಾಮದ ಹುಟ್ಟು ಅಂಧ ಕಲಾವಿದರಾಗಿರುವ ಡಿಕ್ಕಿ ಸಿದ್ದಯ್ಯ ಅವರು ಕೈಯಲ್ಲಿ ಡಿಕ್ಕಿ ಹಿಡಿದು ನೀಲಗಾರ ಪರಂಪರೆಯ ವೃತ್ತಿ ಗಾಯಕರಾದವರು. ಕೆಬ್ಬೆಪುರ ರಾಚಪ್ಪ ಅವರ ಬಳಿ ಹಾಡುಗಳನ್ನು ತನ್ನ ಹದಿನಾಲ್ಕನೇ ವಯಸ್ಸಿನಲ್ಲಿಯೇ  ಕಲಿತು ಮಾಡುವುದನ್ನು ಕರಗತ ಮಾಡಿಕೊಂಡರು. ಮಂಟೇಸ್ವಾಮಿ ಸಿದ್ದಪ್ಪಾಜಿ ನಂಜುಂಡೇಶ್ವರ ಮೈದಾಳರಾಮ ಮಾದೇಶ್ವರನ ಕಥನಕಾವ್ಯ ಗಳನ್ನು ಮತ್ತು ತತ್ವಪದ ಬಿಡಿ ಗೀತೆಗಳನ್ನು  ಸುಶ್ರಾವ್ಯವಾಗಿ ಹಾಡುತ್ತಾರೆ. ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ 2008 ರಲ್ಲಿ  ಲಭಿಸಿದ್ದು, 2022 ಜನವರಿ 1೦ ಸೋಮವಾರ ರಾಮನಗರ ಜಾನಪದಲೋಕದಲ್ಲಿ ಸಂಜೆ 4 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭವು  ನಡೆಯಲಿದೆ. ಪ್ರಶಸ್ತಿ ಐದು ಸಾವಿರ ನಗದು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಅವರು ಅಂಕಹಳ್ಳಿ ಡಿಕ್ಕಿ ಸಿದ್ದಯ್ಯ ಅವರನ್ನು ಅಭಿನಂದಿಸಿದ್ದಾರೆ

See also  ಚಾಮರಾಜನಗರದಲ್ಲಿ ವರದಕ್ಷಿಣಿಗೆ ದಾಹಕ್ಕೆ ಗೃಹಿಣಿ ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು