News Kannada
Tuesday, October 03 2023
ಚಾಮರಾಜನಗರ

ಚಾಮರಾಜನಗರ: ಪಿಕಪ್ ಪಲ್ಟಿ ಹೊಡೆದ ಪರಿಣಾಮ ಒಬ್ಬ ಸಾವು, ಹತ್ತು ಮಂದಿಗೆ ಗಾಯ

Chamarajanagar: One killed, 10 injured after pick-up overturns in Chamarajanagar
Photo Credit : By Author

ಚಾಮರಾಜನಗರ: ಗಾರೆ ಕೆಲಸಗಾರರನ್ನು ಕರೆದೊಯ್ಯುತ್ತಿದ್ದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಒಬ್ಬ ಸಾವನ್ನಪ್ಪಿ ಹತ್ತು ಮಂದಿ ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ‌ ಕಮರವಾಡಿ ಗೇಟ್ ಬಳಿ ನಡೆದಿದೆ.

ಕೆಲಸಗಾರರನ್ನು ಹೊತ್ತೊಯ್ಯುತ್ತಿದ್ದ  ಅಶೋಕ್ ಲೇಲ್ಯಾಂಡ್ನ ದೋಸ್ತ್ ಎಂಬ ಪಿಕ್‌ಅಪ್ ವಾಹನ ಮೈಸೂರಿನಿಂದ ಯಳಂದೂರು ತಾಲೂಕಿನ‌ ಹೊನ್ನೂರು ಗ್ರಾಮಕ್ಕೆ ಕಾರ್ಮಿಕರು ಹೋಗುತ್ತಿದ್ದರು.

ಎಂದಿನಂತೆ ಗಾರೆ ಕೆಲಸ ಮುಗಿಸಿಕೊಂಡು ಹಿಂತಿರುಗುತ್ತಿದ್ದ ವೇಳೆ ಚಾಮರಾಜನಗರ ತಾಲೂಕಿನ‌ ಕಮರವಾಡಿ ಗೇಟ್ ಬಳಿ  ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯ ಹಳ್ಳಕ್ಕೆಮಗುಚಿ ಬಿದ್ದಿದೆ ಪರಿಣಾಮ ಗಂಭೀರ ಗಾಯಗೊಂಡ ಒಬ್ಬ ಸಾವನ್ನಪ್ಪಿದರೆ ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸ್ಥಳಕ್ಕೆ  ಸಂತೇಮರಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

See also  ಟೊಮೊಟೋ ಜ್ವರ ಭೀತಿ: ತೀವ್ರ ತಪಾಸಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು