News Kannada
ಹಾಸನ

ಬೇಲೂರು: ರಾಗಿ-ಭತ್ತ ಖರೀದಿ ಕೇಂದ್ರದ ಉದ್ಘಾಟನೆ

Belur: Ragi-paddy procurement centre inaugurated
Photo Credit : News Kannada

ಬೇಲೂರು: ರಾಗಿ ಮತ್ತು ಭತ್ತ ಖರೀದಿ ಕೇಂದ್ರದಲ್ಲಿ ಯಾವುದೇ ಲೋಪ ದೋಷ ಗಳು ಕಂಡುಬಾರದಂತೆ ಖರೀದಿ ಮಾಡಬೇಕು ಎಂದು ಶಾಸಕ ಎಸ್ ಲಿಂಗೇಶ್ ಸೂಚಿಸಿದ್ದಾರೆ.

ಇಲ್ಲಿನ ಎಪಿಎಂಸಿ ಆವರಣ ದಲ್ಲಿ ರಾಗಿ ಮತ್ತು ಭತ್ತ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು. ಬೆಳೆದ ಬೆಳೆಗೆ ಬೆಲೆ ಸಿಗದಿದ್ದಾಗ ಸರ್ಕಾರ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಬೆಳೆಯನ್ನು ಖರೀದಿಸುತ್ತದೆ, ಕಳೆದ ಬಾರಿ ಮದ್ಯವರ್ತಿಗಳಿಂದ ಖರೀದಿಸಿರುವ ಮತ್ತು ಹಣಕ್ಕಾಗಿ ರೈತರನ್ನು ಪೀಡಿಸಿರುವ ಘಟನೆ ಗಳು ಸಂಭವಿಸಿದ ಈ ಬಾರಿ ಈ ರೀತಿಯ ಯಾವುದೇ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದರು.

ಅನಗತ್ಯ ಸಮಸ್ಯೆಗಳನ್ನು ಹೇಳದೆ ಪೂರಕವಾದ ವ್ಯವಸ್ಥೆ ಗಳನ್ನು ತಯಾರು ಮಾಡಿಕೊಳ್ಳ ಬೇಕು, ರೈತರನ್ನು ಯಾವುದೇ ಕಾರಣಕ್ಕೂ ಅಲೆದಾಡಿಸಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಖರೀದಿ ಕೇಂದ್ರದ ಅಧಿಕಾರಿ ಸಾನ್ನಿ, ಮಾತನಾಡಿ, ರಾಗಿಯನ್ನು ೩೫೭೮ ರೂ ಬೆಂಬಲ ಬೆಲೆಗೆ ಖರೀದಿಸಲಾಗುತ್ತಿದ್ದು, ಈಗಾ ಗಲೇ ೩೨೩೦೨ ಕ್ವಿಂಟಾಲ್ ರಾಗಿ ನೀಡಲು ೨೨೫೨ ರೈತರು ನೊಂದಣಿ ಮಾಡಿಕೊಂಡಿದ್ದಾರೆ. ಸಾಮಾನ್ಯ ಭತ್ತಕ್ಕೆ ೨೦೪೦ರೂ ಮತ್ತು ಗ್ರೇಡ್ ಭತ್ತಕ್ಕೆ ೨೦೫೦ರೂ ಬೆಂಬಲ ಬೆಲೆ ನಿಗದಿಪಡಿಸಲಾ ಗಿದ್ದು, ೨೫೮೦ ಕ್ವಿಂಟಾಲ್ ಭತ ನೀಡಲು ೨೪ ರೈತರು ಮುಂದೆ ಬಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಹಶೀ ಲ್ದಾರ್ ರಮೇಶ್, ರೈತಸಂಘದ ಬಸವರಾಜು, ಜೆಡಿಎಸ್ ಮುಖಂಡ ತೊಚ ಅನಂತಸುಬ್ಬ ರಾಯ, ಶಿರಸ್ತೆದಾರ್ ಮಂಜು ನಾಥ್, ಕೃಷಿಇಲಾಖೆ ಕಟ್ಟಿಮನಿ ಹಾಗೂ ರೈತರು ಇದ್ದರು.

See also  ಹಾಸನ: ರೈತರು ಅಗೆದ ಕಂದಕಕ್ಕೆ ಬಿದ್ದ ಆನೆ ಮರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು