News Kannada
Wednesday, March 29 2023

ಹಾಸನ

ಹಾಸನ: ತೆನೆ ಹೊರಲು ಸಿದ್ದರಾದ ಮಾಜಿ ಸಚಿವ ಎ.ಮಂಜು

Photo Credit : News Kannada

ಹಾಸನ: ಅರಕಲಗೂಡು ವಿಧಾನಸಭೆಯಲ್ಲಿ ಅನಿರೀಕ್ಷಿತವಾದ ರಾಜಕೀಯ ಬೆಳವಣಿಗೆ ನಡೆದಿದ್ದು, ಮಾಜಿ ಸಚಿವ ಎ.ಮಂಜು ತೆನೆ ಹೊರಲು ಸಿದ್ದರಾಗಿದ್ದಾರೆ.

ಬಹಳ ದಿನಗಳಿಂದ ಎ.ಮಂಜು ರಾಜಕೀಯವಾಗಿ ಅತಂತ್ರವಾಗಿದ್ದ ಸಮಯದಲ್ಲಿ ಬಿಜೆಪಿಯಿಂದ ದೂರ ಉಳಿದಿದ್ದರು. ಇನ್ನೇನು ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕರಾಗಿದ್ದರು.

ಆದರೂ ಏನನ್ನೂ ಅಧಿಕೃತ ವಾಗಿ ಹೇಳದೆ ತಮ್ಮ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೆನೆ ಎಂದು ಮತದಾರರ ಮನೆ ಬಾಗಿಲಿಗೆ ಹೋಗಿ ನಿಮ್ಮ ಬೆಂಬಲ ಕೊಡಿ ಎಂದು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾಧ್ಯ ಮಗಳೊಂದಿಗೆ ಮಾತನಾಡಿ ಎ.ಮಂಜು ಅವರೊಂದಿಗೆ ಹಲವು ಸುತ್ತಿನ ಮಾತುಕತೆ ಮಾಡಲಾಗಿದೆ ಎಂದು ಹೇಳಿ ಹಾಸನ ಜಿಲ್ಲೆಯ ರಾಜಕಾರಣ ದಲ್ಲಿ ಸಂಚಲನ ಮೂಡಿಸಿದ್ದಾರೆ.

ಮುಂದುವರೆದ ಅವರು ಈ ಕುರಿತು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸಹ ಹಲವು ಸುತ್ತಿನ ಮಾತುಯನ್ನು ಎ.ಮಂಜು ಜೊತೆ ನಡೆಸಿದ್ದಾರೆ ಎಂದು ತಿಳಿಸಿದರು.

ಅಂತಿಮವಾಗಿ ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರಕ್ಕೆ ಎ.ಮಂಜು ಅವರನ್ನು ಕಣಕ್ಕೆ ಇಳಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿರುವುದು ಕುತೂಹಲಕ್ಕೆ ತೆರೆ ಬಿದ್ದಿದೆ.

ಎ.ಮಂಜು ಜೆಡಿಎಸ್ ಸೇರ್ಪಡೆ ಅಂತಿಮವಾಗುತ್ತಿದ್ದಂತೆ ಹಾಲಿ ಶಾಸಕ ಎ.ಟಿ. ರಾಮ ಸ್ವಾಮಿ ಪಕ್ಷದಿಂದ ಹೊರ ನೆಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಇನ್ನೂ ಕಾಂಗ್ರೆಸ್ ಟಿಕೇಟ್ ಕಾಯುತ್ತಿದ್ದ ಕೃಷ್ಣೇಗೌಡ, ಡಾ ದಿನೇಶ್ ಬೈರೇಗೌಡ ಶ್ರೀಧರ್ ಗೌಡ,ವಿಜಯ್ ಹಾದಿ ಸುಗಮವಾಗಿದೆ.

ಜಿಲ್ಲೆಯಲ್ಲಿ ಪ್ರಭಲ ಒಕ್ಕಲಿಗ ಮುಖಂಡ ಜೆ.ಡಿಎಸ್ ನತ್ತಾ ವಾಲಿರುವುದು ಪಕ್ಷಕ್ಕೆ ಮತಷ್ಟು ಬಲ ಬಂದತೇ ಆಗಿದೆ ಎಂದು ಮೂಲಗಳು ತಿಳಿಸಿವೆ.

See also  ಹಾಸನ: ಐ.ಐ.ಟಿ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ರೇವಣ್ಣ ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು