ಹಾಸನ: ಜಿಲ್ಲೆಯ ವೈದ್ಯಕೀಯ ಲೋಕದಲ್ಲಿಯೇ ಪ್ರಥಮ ಪ್ರಯತ್ನವಾಗಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು TAVI/R (ಟ್ರಾನ್ಸ್ ಕೆಥೇಟರ್AORTIC VALVE) ಹೃದಯ ಕವಾಟ ಜೋಡಣೆ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಮಂಗಳ ಆಸ್ಪತ್ರೆಯ ಸಿಇಓ ಡಾ. ಎಂ.ಪಿ ಅಶೋಕ್ ಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು ನಮ್ಮ ಆಸ್ಪತ್ರೆಯಲ್ಲಿ ಈ ರೀತಿಯ ಯಶಸ್ವಿಯಾಗಿ ಪೂರ್ಣಿಗೊಳಿಸಲಾಗಿದ್ದು ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥರಾದ ಪ್ರಧಾನ ಹೃದಯ ಶಸ್ತ್ರಚಿಕಿತ್ಸಕ ಡಾ. ಆಶಿತ್ ಶ್ರೀಧರ್ ಹಾಗೂ ಅರವಳಿಕೆ ತಜ್ಞರಾದ ಡಾ.ಸಿಮಾ ಭಟ್ ಹಾಗೂ ಸಿಬ್ಬಂದಿಗಳು ಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ ಎಂದರು.
ಈ ವೇಳೆ ಮಾತನಾಡಿದ ಡಾ. ಆಶಿತ್ ಶ್ರೀಧರ್ ಹಾಸನ ಮೂಲದ ೭೮ ವರ್ಷದ ವೃದ್ಧರಿಗೆ ಹಲವು ದಿನದಿಂದ ಹೃದಯದ ರಕ್ತದ ಚಲನೆ ತೀವ್ರ ಕಡಿಮೆಯಾಗಿತ್ತು ದಣಿವು ಉಸಿರಾಟ ದಿಂದ ಎದೆ ನೋವು ತಲೆಸುತ್ತು ಕಾಣಿ ಸಿಕೊಳ್ಳುತ್ತಿತ್ತು ನಂತರ ಹೃದಯ ಘಾತಕ್ಕೆ ಒಳಗಾದರು. ಕಾರಣ ಅವರ ಕವಾಟದಲ್ಲಿ ಕ್ಯಾಲ್ಸಿಯಂ ಅಂಶ ಸೇರಿಕೊಂಡು ಕವಾಟ ಬಹಳ ಚಿಕ್ಕದಾಗಿ ಮುಂದಿನ ಎರಡು ವರ್ಷ ಜೀವನ ಸಂಕಷ್ಟಮಯವಾಗಿತ್ತು.
ನಂತರ ನಮ್ಮ ಆಸ್ಪತ್ರೆಗೆ ದಾಖಲಾದಾಗ ಒಂದು ತಿಂಗಳ ಸತತ ಹಾಗೂ ತೀವ್ರ ವೈದ್ಯಕೀಯ ಪರಿಶೀಲನೆ ಒಳಪಡಿಸಿ ನೂತನ ಬಗೆಯ ಚಿಕಿತ್ಸೆ ಬಗ್ಗೆ ತಿಳಿಸಿದಾಗ ಅವರ ಒಪ್ಪಿ ಗೆಯನ್ನು ಪಡೆದು ಯಶಸ್ವಿ ಯಾಗಿ ಈ ವಿಧಾನದ ಚಿಕಿತ್ಸೆ ಪೂರ್ಣಗೊಳಿಸಲಾಯಿತು ಎಂದರು .
ಟಿಎವಿಐ ವಿಧಾನದಲ್ಲಿ ಶಸ್ತ್ರ ಚಿಕಿತ್ಸೆಯೆಲ್ಲ ಆಗುವಂತೆ ತೆರೆದ ಗಾಯಗಳಾಗಲಿ, ಹೊಲಿಗೆಗಳಾ ಗಲಿ ಈ ಚಿಕಿತ್ಸೆಗೆ ಬೇಕಾಗಿರುವು ದಿಲ್ಲ ಅರವಳಿಕೆ ಕೊಟ್ಟು ಕಾಲಿನ ರಕ್ತನಾಳದಿಂದ ಹೊಸ ಕವಾ ಟವನ್ನು ಅಳವಡಿಸಲಾಗು ತ್ತದೆ. ಈ ವಿಧಾನದಲ್ಲಿ ರೋಗಿಯ ಕೇವಲ ಮೂರು ಗಂಟೆಗಳ ನಂತರ ತಮ್ಮ ಚಟುವಟಿಕೆಗಳಲ್ಲಿ ಪ್ರಾರಂಭಿಸಬಹುದು ಹಾಗೂ ೪೮ಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಬಹುದಾಗಿದೆ.
ಇದೀಗ ಚಿಕಿತ್ಸೆ ಪಡೆದವರು ಎರಡು ದಿನಗಳಲ್ಲಿ ಮನೆಗೆ ತೆರಳಿ ತಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಕಂಡಿದ್ದಾರೆ ಎಂದು ಹೇಳಿದರು.