News Kannada
Thursday, March 23 2023

ಮಡಿಕೇರಿ

ಕಸ್ತೂರಿ ರಂಗನ್ ವರದಿ ಪರಾಮರ್ಶೆಗೆ ಕರ್ನಾಟಕದಿಂದ ಸಂಸದ ಪ್ರತಾಪ್ ಸಿಂಹ ನೇಮಕ

Photo Credit :

ಮಡಿಕೇರಿ: ಕಸ್ತೂರಿರಂಗನ್ ವರದಿಯಿಂದ ಉಂಟಾಗುವ ಸಾಧಕ-ಬಾಧಕಗಳ ಬಗ್ಗೆ ಮರು ಪರಾಮರ್ಶೆ ನಡೆಸುವ ಸಂಬಂಧ ಜಂಟಿ ಸದನ ಸಮಿತಿಯೊಂದನ್ನು ರಚಿಸಲಾಗಿದ್ದು, 31 ಸದಸ್ಯ ಬಲದ‌ ಸಮಿತಿಯಲ್ಲಿ ಕರ್ನಾಟಕದಿಂದ ಏಕೈಕ ಪ್ರತಿನಿಧಿಯಾಗಿ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ನೇಮಕಗೊಂಡಿದ್ದಾರೆ.

ಕೇಂದ್ರ ಪರಿಸರ ಸಚಿವ ಭುಪೇಂದ್ರ ಯಾದವ್ ನೇತೖತ್ವದ ಈ ಸಮಿತಿ ಕಸ್ತೂರಿ ರಂಗನ್ ವರದಿ ಸೇರಿದಂತೆ ದೇಶದ ಜೀವವೈವಿಧ್ಯತೆ ಸಂಬಂಧಿತ 2002 ರ ಕಾಯ್ದೆ ಕುರಿತು ಪರಾಮರ್ಶಿಸಲಿದ್ದು, ಮುಂಬರುವ ಫೆಬ್ರವರಿಯೊಳಗಾಗಿ ವರದಿ ನೀಡಬೇಕಿದೆ.

ಕಸ್ತೂರಿರಂಗನ್ ವರದಿಯನ್ನು ಪಶ್ಚಿಮಘಟ್ಟದ ಜಿಲ್ಲೆಗಳ ಜನತೆಗೆ ಯಾವುದೇ ಸಮಸ್ಯೆಯಾಗದಂತೆ ಜಾರಿಗೊಳಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದ್ದು, ಅದಕ್ಕೆ ಪೂರಕವಾಗಿ, ವರದಿಯಲ್ಲಿರುವ ಸಾಧಕ-ಬಾಧಕಗಳ ಬಗ್ಗೆಯೂ ಸಮಿತಿ ಪರಾಮರ್ಶೆ ನಡೆಸಲಿದೆ.

ಸಮಿತಿಯಲ್ಲಿ ಸಂಸದ ಪ್ರತಾಪ್ ಸಿಂಹ ಒಳಗೊಂಡಂತೆ ದೇಶದ 21 ಸಂಸದರು, ರಾಜ್ಯಸಭೆಯ 10 ಸದಸ್ಯರ ನೇಮಕವಾಗಿದ್ದು, ಕರ್ನಾಟಕದಿಂದ ಏಕೈಕ ಸದಸ್ಯರಾಗಿ ಪ್ರತಾಪ್ ಸಿಂಹ ನೇಮಕವಾಗಿದ್ದಾರೆ.

See also  ರಾಜ್ಯದಲ್ಲಿ 6 ಕೋಟಿ ಕೋವಿಡ್ ಪರೀಕ್ಷೆ, ಕರ್ನಾಟಕಕ್ಕೆ 3ನೇ ಸ್ಥಾನ: ಸಚಿವ ಡಾ.ಕೆ.ಸುಧಾಕರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು