News Kannada
Friday, September 22 2023
ಮಂಡ್ಯ

ಮಂಡ್ಯ: ಕಾಡುಕೊತ್ತನಹಳ್ಳಿಯಲ್ಲಿ ಬಾಕಿ ಕೂಲಿ ಪಾವತಿಗಾಗಿ ಪ್ರತಿಭಟನೆ

Mandya: Protest at Kadukottanahalli for payment of arrears of wages
Photo Credit : By Author

ಮಂಡ್ಯ: ಖಾತ್ರಿ ಕೆಲಸ ಸಮರ್ಪಕ ಜಾರಿಗಾಗಿ ಬಾಕಿ ಕೂಲಿ ಪಾವತಿಗೆ, ಕಾಯಕ ಬಂಧುಗಳ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಹಾಗೂ ಪಂಚಾಯತ್ ರಾಜ್ ಕಾಯ್ದೆ ನಿಯಮದಡಿ ನೀರು ಕೊಡಲು ಒತ್ತಾಯಿಸಿ ಭಾರತೀನಗರ ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮ ಪಂಚಾಯಿತಿ ಎದುರು ಪಿಡಿಓ ವಿರುದ್ದ ಪ್ರತಿಭಟನೆ ನಡೆಸಲಾಯಿತು.

ಬಳಿಕ ಗ್ರಾಮ ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ತಳಗವಾದಿ ಕೃಷಿ ಕಾರ್ಮಿಕರ ಸಂಘದ ವಲಯ ಸಮಿತಿ ಅಧ್ಯಕ್ಷ ಆನಂದ್ ಮಾತನಾಡಿ, ಕಾಡುಕೊತ್ತನಹಳ್ಳಿ, ಭುಜವಳ್ಳಿ, ಕಪರೆಕೊಪ್ಪಲು, ಗ್ರಾಮದ ಕೂಲಿ ಕಾರ್ಮಿಕರು ಎರಡು ವಾರಕ್ಕೂ ಹೆಚ್ಚು ಮಾನವ ದಿನಗಳು ಕೆಲಸ ನಿರ್ವಹಿಸಿದ್ದು, ಇದುವರೆಗೂ ಕೂಲಿ ಕೊಡದೇ ಎರಡು ವಾರದ ಎನ್.ಎಂ.ಆರ್.ಅನ್ನು ಜೀರೋ ಮೂಲಕ ಕೂಲಿ ಕಾರ್ಮಿಕರನ್ನು ನಿರ್ಲಕ್ಷಿಸುವುದನ್ನು ಕೃಷಿ ಕೂಲಿಕಾರರ ಸಂಘಟನೆ ಗ್ರಾಮ ಸಮಿತಿಗಳು ತಿವ್ರವಾಗಿ ಖಂಡಿಸಿದರು.

ಈ ಸಂದರ್ಭದಲ್ಲಿ ಕೃಷಿ ಕೂಲಿಕಾಕರ ಸಂಘದ ತಾಲೂಕು ಕಾರ್ಯದರ್ಶಿ ಟಿ.ಪಿ.ಅರುಣ್ ಕುಮಾರ್, ತಾ.ಉಪಾಧ್ಯಕ್ಷ ಹೊನ್ನಯ್ಯ,ನಾಗರಾಜು, ಕಾರ್ಯದರ್ಶಿ ವೆಂಕಟೇಶ್, ಗ್ರಾಮ ಘಟಕದ ಅದ್ಯಕ್ಷ ರೇಣುಕಮ್ಮ, ಕಪನಿಗೌಡ, ಮಹದೇವಮ್ಮ ಮತ್ತಿತರರು ಇದ್ದರು.

See also  ಮಂಡ್ಯ: ಕೊಂಡೋತ್ಸವ ವೀಕ್ಷಣೆ ವೇಳೆ ಛಾವಣಿ ಕುಸಿದು ಮಹಿಳೆ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು