News Kannada
Sunday, October 01 2023
ಮೈಸೂರು

ಮೈಸೂರು: ಪಿರಿಯಾಪಟ್ಟಣದ ಹಾರಂಗಿ ಬಲದಂಡೆ ನಾಲೆಯಲ್ಲಿ ಕುಸಿತ

Collapse in Harangi right bank canal in Periyapatna
Photo Credit : By Author

ಮೈಸೂರು: ಮಳೆಯಿಂದ ಭೂ ಕುಸಿತ ಸಂಭವಿಸಿದ ಪರಿಣಾಮ ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲು ಸಮೀಪದ ಹಾರಂಗಿ ಬಲದಂಡೆ ನಾಲೆ ಸಂಪರ್ಕ ಕಲ್ಪಿಸುವ ಕೋಟಯ್ಯನ ಕೊಪ್ಪಲು ಹಾಗೂ ಆನೆಕಟ್ಟೆ ರಸ್ತೆ ಸಂಪರ್ಕ ಕಡಿತಗೊಂಡಿರುವುದು ಬೆಳಕಿಗೆ ಬಂದಿದೆ.

ಹಾರಂಗಿ ಬಲದಂಡೆ ನಾಲೆ ಹಾದು ಹೋಗಿದ್ದು, ಇಲ್ಲಿ ಭೂಕುಸಿತವಾದ ಪರಿಣಾಮ ಮಣ್ಣು ನಾಲೆಗೆ ಬಿದ್ದಿದ್ದು, ನೀರು ಹರಿದು ಹೋಗಲು ಕಷ್ಟವಾಗಿದೆ. ಇನ್ನು ನಾಲೆ ರಸ್ತೆ ಬಳಿ ಒಂದು ಕಿ.ಮೀ ನಷ್ಟು ಡೀಪ್ ಕಟ್ ಇದ್ದು ಸುಮಾರು 90 ರಿಂದ 100 ಅಡಿ ಆಳವಿದೆ,. ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಡೀಪ್ ಕಟ್ ಕೆಲವು ಭಾಗಗಳಲ್ಲಿ ಮಣ್ಣು ಕುಸಿದ ಪರಿಣಾಮ ಕೋಟಯ್ಯನ ಕೊಪ್ಪಲು ರಸ್ತೆ ತಿರುವಿನಲ್ಲಿ ಮಣ್ಣು ಕಾಲುವೆಗೆ ಬಿದ್ದಿದೆ ಇದರಿಂದ ಆನೆಕಟ್ಟೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮಣ್ಣು ಕುಸಿತದ ಕಾರಣ ನಾಲೆಯ ನೀರಿನ ಹರಿವಿಗೆ ತೊಂದರೆಯಾಗಿದೆ. ಈ ಹಿಂದೆಯೂ ಹಲವು ಬಾರಿ ಮಣ್ಣು ಕುಸಿದು ತೊಂದರೆಯಾಗಿದೆ. ಈ ಬಗ್ಗೆ ಹಾರಂಗಿ ಪುನರ್ವಸತಿ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ನೂತನವಾಗಿ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಸಮಸ್ಯೆ ಉಂಟಾದ ಸಂದರ್ಭ ತಾತ್ಕಾಲಿಕ ಪರಿಹಾರ ಒದಗಿಸುವ ಬದಲು ಶಾಶ್ವತವಾಗಿ ಸೇತುವೆ ಹಾಗೂ ನಾಲೆ ಬದಿಗಳಲ್ಲಿ ಬ್ಯಾರಿಕೇಡ್ ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.ಸಂಬಂಧಿಸಿದ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.

See also  ದೆಹಲಿ: ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಮಹತ್ವದ ಸಂದೇಶ ನೀಡಿದ ಪ್ರಧಾನಿ ಮೋದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು