News Kannada
Thursday, June 01 2023
ಮೈಸೂರು

ಮೈಸೂರು: ಸತ್ಯದ ಅನ್ವೇಷಣೆಗೆ ಶೋಧನೆ ಅನಿವಾರ್ಯ ಎಂದ ಎಚ್.ಆರ್.ಲೀಲಾವತಿ

H.R. Leelavathi said that search is essential for the pursuit of truth.
Photo Credit : By Author

ಮೈಸೂರು: ಜಗತ್ತಿನಲ್ಲಿ ಸತ್ಯದ ದರ್ಶನ ನೇರಾನೇರ ಇರುವುದಿಲ್ಲ. ಸತ್ಯದ ಅನ್ವೇಷಣೆಗೆ ಎಲ್ಲ ಆಯಾಮಗಳ ಶೋಧನೆ ಅನಿವಾರ್ಯ ಎಂದು ಹಿರಿಯ ಗಾಯಕಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಎಚ್.ಆರ್.ಲೀಲಾವತಿ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಬೆಂಗಳೂರಿನ ಲೋಕ ಪಬ್ಲಿಕೇಷನ್ಸ್ ಸಹಯೋಗದಲ್ಲಿ ರೋಟರಿ ಪಶ್ಚಿಮ ಸಭಾಂಗಣದಲ್ಲಿ ನಡೆದ ಲೇಖಕಿ ವಸಂತ ಕಲ್‌ಬಾಗಲ್ ಅವರ ವ್ಯಕ್ತಿಚಿತ್ರಗಳ ಸಮ್‌ದರ್ಶನ, ಲಲಿತ ಪ್ರಬಂಧಗಳ ಅಡ್ಡಿತುಷ ಬಕ್ಕಜ ಬನ್ನಿ ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇವತ್ತು ಉದ್ಯಮಿ ವಿಜಯ್ ಮಲ್ಯ ಅವರ ಬಗ್ಗೆ ನಮ್ಮ ದೃಷ್ಟಿಕೋನ ಏನಿದೆ ವಸಂತ ವಿಜಯ್ ಮಲ್ಯರ ನೇರಾನೇರ ಸಂದರ್ಶನ ಮಾಡಿ ಅವರ ಸಂಪರ್ಕದಲ್ಲಿದ್ದು ಕಟ್ಟಿಕೊಟ್ಟ ಚಿತ್ರಣವೂ ಮಲ್ಯರ ವ್ಯಕ್ತಿತ್ವದ ಭಿನ್ನತೆಯ ದೃಷ್ಟಿಕೋನ. ವಿಜಯಮಲ್ಯರ ಸಂದರ್ಶನ ಓದಿ ಮಲ್ಯರ ಬಗೆಗಿನ ನನ್ನ ದೃಷ್ಟಿಕೋನ ಬದಲಾಯಿಸಿಕೊಂಡೆ. ಒಬ್ಬ ವ್ಯಕ್ತಿಯನ್ನು ಬಹು ಆಯಾಮಗಳಿಂದ ನೋಡಬೇಕಾಗುತ್ತದೆ ಅನಿಸಿತು ಎಂದು ಅಭಿಪ್ರಾಯಪಟ್ಟರು.

ಪುತೀನ ಅವರ ವ್ಯಕ್ತಿತ್ವದ ಚಿತ್ತಾರ, ನ್ಯೂಜಿಲೆಂಡ್ ಪ್ರಧಾನಿ ಭೇಟಿ, ಕಮಲ್ ಹಾಸನ್ ಅವರೊಂದಿಗಿನ ಸಂದರ್ಶನ, ರತನ್ ಟಾಟಾ ಅವರ ಬಗ್ಗೆ ಲೇಖನ ಬರೆದ ವಸಂತ ಅವರ ಧೈರ್ಯ, ಜಾಣತನ, ಬುದ್ಧಿವಂತಿಕೆ ಮೆಚ್ಚಬೇಕು ಎಂದರು.

ಲೇಖಕಿ ವಸಂತ ಕಲ್‌ಬಾಗಲ್ ವಿಶ್ವದ ಭಿನ್ನ ಭಿನ್ನ ಕ್ಷೇತ್ರಗಳ ಸುಪರಿಚಿತರಾದ ಸಾಧಕರನ್ನು ಭೇಟಿ ಮಾಡಿ ಸಂದರ್ಶನ ಮಾಡಿದ್ದಾರೆ. ಯಾವುದೋ ಒಂದು ಕ್ಷೇತ್ರಕ್ಕೆ ಕಟ್ಟುಬಿದ್ದಿಲ್ಲ. ವಸಂತರ ಮನದ ಚಿತ್ರಗಳು ಹೃದಯ ಮುಟ್ಟುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂದರ್ಶಕರ ವ್ಯಕ್ತಿತ್ವದ ಪ್ರತಿಬಿಂಬ. ನಿಚ್ಚಳವಾಗಿ ವ್ಯಕ್ತಿತ್ವಗಳ ಚಿತ್ರಣವನ್ನು ಕಣ್ಣ ಮುಂದೆ ನಿಲ್ಲಿಸಿದ್ದಾರೆ. ವಸಂತ ಮಾಸ ಸೌಂದರ್ಯದ ಪ್ರತೀಕ. ವಸಂತ ಹೃದಯದಲ್ಲಿ ಸೌಂದರ್ಯ ತುಂಬಿಕೊಂಡಿದ್ದಾರೆ. ಸಾಧಿಸುವ ಛಲವುಳ್ಳ ಗಟ್ಟಿಗಿತ್ತಿಯೂ ಆಗಿದ್ದಾರೆ ಎಂದು ಹಾರೈಸಿದರು.

ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ಕೃತಿಗಳ ಕುರಿತು ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪ್ರಕಾಶಕ ರಘುವೀರ್ ಸಮರ್ಥ್ ಮುಂತಾದವರು ಇದ್ದರು.

See also  ಪ್ರಾಣಿ ಪಕ್ಷಿ ಸಂಕುಲಗಳ ಉಳಿವಿಗೆ ಮುಂದಾಗಿ: ಮಂಜಮ್ಮ ಜೋಗತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು