News Kannada
Wednesday, May 31 2023
ಮೈಸೂರು

ಮೈಸೂರಿನಲ್ಲಿ ಮಕ್ಕಳ ಪಾಲನೆಗೆ ಪೋಷಕರ ಕಾರ್ಯಾಗಾರ

Parents workshop for child rearing in Mysuru
Photo Credit : By Author

ಮೈಸೂರು: ಪವರ್ ಫುಲ್ ಮೈಂಡ್ಸ್ ವತಿಯಿಂದ ಇದೇ ಭಾನುವಾರ(ಏಪ್ರಿಲ್2) ಸಂಜೆ 4 ರಿಂದ 5.30 ರವರೆಗೆ ಪೋಷಕರ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಪವರ್ ಫುಲ್ ಮೈಂಡ್ಸ್ ನ ವಿದ್ಯಾರ್ಥಿ ಸಲಹೆಗಾರರಾದ ಬಿ.ಎಲ್. ವೇದಪ್ರದ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಪೋಷಕರ ಕಾರ್ಯಾಗಾರಕ್ಕೆ ಉಚಿತ ಪ್ರವೇಶವಿದೆ ಎಂದು ಹೇಳಿದರಲ್ಲದೆ, ಪೋಷಕರ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೇರಣಾ ಅಕಾಡೆಮಿಯ ನಿರ್ದೇಶಕರಾದ ಎಸ್. ಎಸ್. ಭಟ್ ಹಾಗೂ ನಿರಂಜನ್ ಅವರುಗಳು ಭಾಗವಹಿಸಲಿದ್ದಾರೆ ಎಂದರು.

ಮಕ್ಕಳ ಪಾಲನೆ, ಆರೋಗ್ಯ,ವಿದ್ಯಾಭ್ಯಾಸ ಮಕ್ಕಳನ್ನು ಬೆಳೆಸುವುದು ಹಾಗೂ ಅವರನ್ನು ಸರಿದಾರಿಗೆ ತರುವುದು, ಪೋಷಕರ ಹಾಗೂ ಮಕ್ಕಳ ಕೋಪವನ್ನು ನಿಯಂತ್ರಿಸುವುದು ಮತ್ತು ಭಾವನಾತ್ಮಕ ಸಂಬಂಧ ಸರಿಪಡಿಸುವುದರ ಬಗ್ಗೆ ತಿಳಿಸಿಕೊಡಲಾಗುತ್ತದೆ. ಮಕ್ಕಳ ಭಾವನೆಗಳಿಗೆ ಬೆಲೆ ಕೊಟ್ಟು ಅವರನ್ನು ಪ್ರೋತ್ಸಾಹಿಸುವುದರಿಂದ ಈ ಸಮಾಜಕ್ಕೆ ಉತ್ತಮ ಆಸ್ತಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ತಿಳಿಸಿದರು.

ಈ ಕುರಿತು ಚರ್ಚೆ ಮತ್ತು ವಿಚಾರ ವಿನಿಯಮದಲ್ಲಿ ಪೋಷಕರು ಭಾಗವಹಿಸಬೇಕೆಂದು ವೇದಪ್ರದ ಮನವಿ ಮಾಡಿದರು. ಕಾರ್ಯಾಗಾರವು ಪ್ರೇರಣ ಅಕಾಡೆಮಿ, ಹೋಟೆಲ್ ಮಧು ನಿವಾಸ, ಮೊದಲನೇ ಮಹಡಿ, ಗೀತಾ ಸ್ಕೂಲ್ ಹಿಂಭಾಗ, ಸಿದ್ಧಾರ್ಥನಗರ, ಮೈಸೂರು ಈ ವಿಳಾಸದಲ್ಲಿ ನಡೆಯಲಿದೆ‌ ಎಂದರು. ನೋಂದಣಿಗಾಗಿ 9880792029 ವಾಟ್ಸ್ಆಫ್ ಅಥವಾ ಎಸ್ಎಂಎಸ್ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ವೇದಪ್ರಭದ ತಿಳಿಸಿದರು.

See also  ಬೇಹುಗಾರಿಕಾ ಬಲೂನ್‌ ಹೊಡೆದುರುಳಿಸಿದ ಪ್ರಕರಣ: ಕ್ಷಮೆಯಾಚನೆ ಇಲ್ಲ ಎಂದ ಬಿಡನ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು