News Kannada
Monday, March 27 2023

ಕ್ರೀಡೆ

ಬೆಳ್ತಂಗಡಿ: ಪ್ರತಿಭಾ ಪ್ರೋತ್ಸಾಹ, ಸಮುದಾಯದ ಒಗ್ಗಟ್ಟಿಗೆ ಕ್ರೀಡಾಕೂಟಗಳು ಸಹಕಾರಿ

ಕ್ರೀಡಾಕೂಟ
Photo Credit : News Kannada

ಬೆಳ್ತಂಗಡಿ: ಸಮುದಾಯದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಸಮುದಾಯದ ಒಗ್ಗಟ್ಟಿಗೆ ಕ್ರೀಡಾಕೂಟದಂತಹ ಕಾರ್ಯಕ್ರಮಗಳು ಪ್ರಯೋಜನಕಾರಿಯಾಗಿವೆ. ನಮ್ಮ ಸಮುದಾಯಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿದ್ದು, ಅವರಿಗೆ ಸೂಕ್ತ ಅವಕಾಶ ಒದಗಿಸುವ ನಿಟ್ಟಿನಲ್ಲಿ ಸಂಘದ ವತಿಯಿಂದ ಸಾಧ್ಯವಾದಷ್ಟು ಪ್ರಯತ್ನಿಸಲಾಗುತ್ತಿದೆ ಎಂದು ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಎಳನೀರು  ಹೇಳಿದರು.

ಮಲೆಕುಡಿಯರ ಸಂಘ ರಿ. ದ.ಕ. ಜಿಲ್ಲಾ ಸಮಿತಿಯ ವಾರ್ಷಿಕ ಸಮಾವೇಶ ಪ್ರಯುಕ್ತ ಬೆಳ್ತಂಗಡಿ, ಲಾಯಿಲ ಪಡ್ಲಾಡಿ ಹಿ.ಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಲೆಕುಡಿಯರ ಮುಕ್ತ ಕ್ರೀಡಾಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾ. ೪ರಂದು ಬೆಳ್ತಂಗಡಿ ಕೊಯ್ಯೂರು-ಶಿವಗಿರಿಯಲ್ಲಿರುವ ಮಲೆಕುಡಿಯರ ಸಭಾಭವನದಲ್ಲಿ ವಾರ್ಷಿಕ ಸಮಾವೇಶ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನಪ್ರತಿನಿಧಿಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದ ಪ್ರಯುಕ್ತವಾಗಿ ಕ್ರೀಡಾಕೂಟವನ್ನು ಹಮ್ಮಿಕೊಂಡು ಸಮುದಾಯದ ಕ್ರೀಡಾಸ್ಫೂರ್ತಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.

ಕ್ರೀಡಾಕೂಟವನ್ನು ಲಾಯಿಲ ಕೆದ್ದೇಲು ಮನೆಯ ಸುಂದರ ಎಂ.ಕೆ  ಉದ್ಘಾಟಿಸಿದರು. ಮಲೆಕುಡಿಯರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಸಿ ಉಜಿರೆ, ಉಡುಪಿ ಜಿಲ್ಲಾ ಮಲೆಕುಡಿಯರ ಸಂಘದ ಅಧ್ಯಕ್ಷ ಗಂಗಾಧರ್ ಈದು, ಪಡ್ಲಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸೂರಪ್ಪ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಲಾಯಿಲ ಗ್ರಾ. ಪಂ. ಸದಸ್ಯೆ ಶ್ರೀಮತಿ ಜಯಂತಿ, ರಾಜ್ಯ ಮಲೆಕುಡಿಯ ಸಂಘದ ಜೊತೆ ಕಾರ್ಯದರ್ಶಿ ಜಯರಾಮ ಆಲಂಗಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯೇಂದ್ರ ಎಂ. ನಿಡ್ಲೆ ಸ್ವಾಗತಿ, ತಾಲೂಕು ಸಮಿತಿಯ ಸುಂದರ ಶಿಶಿಲ ವಂದಿಸಿದರು. ರಾಜ್ಯ ಮಲೆಕುಡಿಯ ಸಂಘದ ಪ್ರ.ಕಾರ್ಯದರ್ಶಿ ಬಾಲಕೃಷ್ಣ ಪೊಳಲಿ ಕಾರ್ಯಕ್ರಮ ನಿರೂಪಿಸಿದರು.

ಪುರುಷರ ವಾಲಿಬಾಲ್

ಪ್ರಥಮ- ಎಂ.ಕೆ. ಗಯ್ಸ್ ಬಂಟ್ವಾಳ
ದ್ವಿತೀಯ- ಸೆವೆನ್ ಸ್ಟಾರ್ ಸವಣಾಲ್ ಎ
ಬೆಸ್ಟ್ ಅಟ್ಯಾಕರ್- ಮಾಧವ ಸವಣಾಲ್
ಬೆಸ್ಟ್ ಪಾಸರ್- ಸುಮಂತ್ ಬಂಟ್ವಾಳ
ಅಲ್ ರೌಂಡರ್- ಮೋಹನ್ ಬಂಟ್ವಾಳ
ಮಹಿಳೆಯರ ತ್ರೋಬಾಲ್
ಪ್ರಥಮ- ಸೆವೆನ್ ಸ್ಟಾರ್ ಸವಣಾಲ್
ದ್ವಿತೀಯ- ಫ್ರೆಂಡ್ಸ್ ನಿಡ್ಲೆ
ಉತ್ತಮ ಎಸೆತಗಾರ್ತಿ- ಮಾನ್ಯತ

ಉತ್ತಮ ಆಲ್ ರೌಂಡರ್- ಭವ್ಯ
ಪುರುಷರ ಹಗ್ಗ ಜಗ್ಗಾಟ
ಪ್ರಥಮ -ಉಡುಪಿ ಮಲೆಕುಡಿಯ ಫ್ರೆಂಡ್ಸ್ ಬಿ
ದ್ವಿತೀಯ -ವೀರಾಂಜನೇಯ ಕಾಸರಗೋಡು ಎ
ಮಹಿಳೆಯರ ಹಗ್ಗ-ಜಗ್ಗಾಟ
ಪ್ರಥಮ- ಯುವಶಕ್ತಿ ಆಲಂಗಾಯಿ
ದ್ವಿತೀಯ- ವನಶ್ರೀ ಕುತ್ಲೂರು

See also  ಪಾಟ್ನಾ: ಮದ್ಯ ಕಾನೂನು ಉಲ್ಲಂಘನೆ ಪ್ರಕರಣದಲ್ಲಿ ಬಿಜೆಪಿ ಎಂಎಲ್ಸಿಗೆ ಜಾಮೀನು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು