ಅಜ್ಮೀರ್: ನರೇಂದ್ರ ಮೋದಿ ನವೆಂಬರ್ 8 ರಂದು ಜಾರಿಗೆ ತಂದ ನೋಟು ನಿಷೇಧ ವಿಷಯ ಮುಂದಿನ ವರ್ಷದಿಂದ ಶಾಲಾ ಪಠ್ಯ ಪುಸ್ತಕಗಳಲ್ಲಿ ಇರಲಿದೆ ಎಂಬ ಸುದ್ದಿಗಳು ಕೇಳಿ ಬಂದಿದ್ದು, ಇದೀಗ ರಾಜಾಸ್ಥಾನದ ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ನೋಟ್ ಬ್ಯಾನ್ ವಿಷಯ ಸೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಆರ್ ಬಿಎಸ್ ಇ ಅಧ್ಯಕ್ಷ ಬಿಎಲ್ ಚೌಧುರಿ ಹೇಳುವ ಪ್ರಕಾರ ಮಕ್ಕಳಿಗೆ ‘ಕ್ಯಾಸ್ಲೆಸ್ ಸಿಸ್ಟಮ್ ಹಾಗೂ ಮೊಬೈಲ್ ವ್ಯಾಲೆಟ್ ಸ್ಟ್ರಕ್ಚರ್’ ಕುರಿತು ಮಾಹಿತಿ ನೀಡುವ ಸಲುವಾಗಿ ನೋಟ್ ಬ್ಯಾನ್ ನಿರ್ಧಾರ ಬಗ್ಗೆ ಪಠ್ಯದಲ್ಲಿ ಸೇರಿಸುವುದು ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿಯ ಯೋಜನೆ ಆಗಿದೆ ಎಂದಿದ್ದಾರೆ.
ಶಿಕ್ಷಣ ಮಂಡಳಿ ಕಾರ್ಯವೈಖರಿಯನ್ನು ಕೂಡ ಬದಲಾಯಿಸಲಾಗುತ್ತಿದ್ದು, ಆನ್ಲೈನ್ ಮೂಲಕ ಎಲ್ಲ ಫೇಮೆಂಟ್ ಮಾಡುವ ವ್ಯವಸ್ಥೆಗೆ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಹೇಳಿದ ಅವರು, ನಗದು ರಹಿತ ವ್ಯವಸ್ಥೆ ಹಾಗೂ ಮೊಬೈಲ್ ವ್ಯಾಲೆಟ್ ಸ್ಟ್ರಕ್ಚರ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದ್ದು, ಜೊತೆಗೆ ನೋಟ್ ಬ್ಯಾನ್ನಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆಯೂ ವಿದ್ಯಾರ್ಥಿಗಳು ತಿಳಿಯಲು ಇದು ಸಹಕಾರಿ ಎಂದು ಬಿ.ಎಲ್.ಚೌಧರಿ ತಿಳಿಸಿದ್ದಾರೆ.
‘ನೋಟ್ ಬ್ಯಾನ್ ಹಾಗೂ ಕ್ಯಾಸ್ಲೆಸ್ ಎಕನಾಮಿ’ ವಿಷಯನ್ನು ದ್ವಿತೀಯ ಪಿಯುಸಿ ಪಠ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಸೇರ್ಪಡಿಸಲಾಗುವುದು ಎಂದು ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿ ಹೇಳಿದೆ.