ಪಾಕಿಸ್ತಾನ: ಮುಂಬೈ ದಾಳಿಯ ಯೋಜಕ, ಲಷ್ಕರ್ ಎ ತೊಯ್ಬಾದ ಕಮಾಂಡರ್ ಜಕಿಯೂರ್ ರೆಹಮಾನ್ ಲಖ್ವಿ ನನ್ನು ಪಾಕಿಸ್ತಾನದಲ್ಲಿ ಇಂದು ಬಂಧಿಸಲಾಗಿದೆ.
ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಣ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದ ಲಖ್ವಿ, ಬಂದ ಹಣದಿಂದ ಉಗ್ರರಿಗಾಗಿ ಔಷಧಾಲಯ ನಡೆಸುತ್ತಿದ್ದ. ಈ ಬಗ್ಗೆ ಪಂಜಾಬ್ ಕೌಂಟರ್ ಟೆರರ್ ಡಿಪಾರ್ಟ್ಮೆಂಟ್ ಲಾಹೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲಷ್ಕರ್ ಎ ತೊಯ್ಬಾದ ಕಾರ್ಯಾಚರಣೆಗಳ ಕಮಾಂಡರ್ ಆಗಿರುವ ಈತನನ್ನು ವಿಶ್ವಸಂಸ್ಥೆ, 2008ರಲ್ಲಿ ಮುಂಬೈ ದಾಳಿ ನಂತರ ಜಾಗತಿಕ ಉಗ್ರ ಎಂದು ಗುರುತಿಸಿದೆ.
ಆ ಬಳಿಕ 6 ವರ್ಷಗಳ ಕಾಲ ಪಾಕಿಸ್ತಾನದ ಜೈಲಿನಲ್ಲಿ ಇದ್ದ ಈತ 2015ರ ಏಪ್ರಿಲ್ನಲ್ಲಿ ಬಿಡುಗಡೆಯಾಗಿದ್ದ. ಆದರೆ ಮತ್ತೆ ಈತನನ್ನು ಬಂಧಿಸಲಾಗಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ನಿರ್ಬಂಧಗಳ ಸಮಿತಿ, ಜಕಿಯೂರ್ ರೆಹಮಾನ್ ಲಖ್ವಿಗೆ ಮಾಸಿಕ 1.5 ಲಕ್ಷ ರೂಪಾಯಿಯನ್ನು ಮೂಲಭೂತ ವೆಚ್ಚಗಳಿಗಾಗಿ ನೀಡಲು ಪಾಕ್ ಸರ್ಕಾರಕ್ಕೆ ಅನುಮೋದನೆ ನೀಡಿತ್ತು. ಈ ಕಾರಣದಿಂದಾಗಿ ಪಾಕ್ ಮತ್ತೆ ಲಖ್ವಿ ನನ್ನು ಬಂಧಿಸಿದ್ದಾರೆ.