News Kannada
Saturday, December 02 2023
ದೆಹಲಿ

ದೆಹಲಿ: ಕೆಂಪುಕೋಟೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

New Delhi: Prime Minister Narendra Modi at the red fort celebrations
Photo Credit : Twitter

ದೆಹಲಿ:  75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 9ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶ ಹೊಸ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ನವಭಾರತದ ಸಾಕಾರಕ್ಕಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗೆ ಈ ದೇಶ ನಮನ ಸಲ್ಲಿಸುತ್ತದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮಾತುಗಳು

  • ಮುಂದಿನ 25 ವರ್ಷಗಳಲ್ಲಿ ಭಾರತ ಬಲಶಾಲಿ ದೇಶವಾಗಿ ಹೊರಹೊಮ್ಮಬೇಕು.
  • ಹೊಸಹಾದಿಯಲ್ಲಿ ನಡೆಯುವುದಕ್ಕೆ ಮುಂದಿನ 5 ವರ್ಷಗಳಿಗಾಗಿ ನಾವು ‘ಪಂಚಪ್ರಾಣ’ವನ್ನು ಅಳವಡಿಸಿಕೊಳ್ಳಬೇಕು. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವ ದೊಡ್ಡ ಸಂಕಲ್ಪ, ಗುಲಾಮಿತನದ ಎಲ್ಲ ಶೃಂಖಲೆಗಳಿಂದ ಹೊರಬರುವುದು, ನಾವು ಯಾವುದಕ್ಕೆ ವಾರಸುದಾರರಾಗಿದ್ದೇವೋ ಆ ಬಗ್ಗೆ ಹೆಮ್ಮೆ ಹೊಂದುವುದು, ಏಕತೆ, ಐದನೆಯದಾಗಿ ಪ್ರಧಾನಿ-ಮುಖ್ಯಮಂತ್ರಿಗಳೂ ಸೇರಿದಂತೆ ಎಲ್ಲ ನಾಗರೀಕರು ತಮ್ಮ ಕರ್ತವ್ಯಗಳನ್ನು ಪಾಲಿಸುವುದು.
  • ತಮ್ಮ ಭಾಷಣದ ಆರಂಭದಲ್ಲಿಯೇ ಪ್ರಧಾನಿ ಮೋದಿಯವರು ಅಂಬೇಡ್ಕರ್, ನೆಹರು, ಸಾವರ್ಕರ್, ಬುಡಕಟ್ಟು ಹೋರಾಟಗಾರರಾರದ ಬಿರ್ಸಾ ಮುಂಡಾ ಸೇರಿದಂತೆ ಹಲವು ಸ್ವಾತಂತ್ರ್ಯ ಕಲಿಗಳು ಹಾಗೂ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಎಲ್ಲ ಮಹಿಳಾ ಹೋರಾಟಗಾರರನ್ನು ನೆನಪಿಸಿಕೊಂಡರು.
  • ಪ್ರಜಾಪ್ರಭುತ್ವ ಮಾದರಿಗಳ ತಾಯಿ ಭಾರತ. ಸ್ವಾತಂತ್ರ್ಯ ಸಿಕ್ಕ ಪ್ರಾರಂಭದಲ್ಲಿ ಈ ದೇಶ ಕೆಲ ದಿನಗಳಲ್ಲೇ ವಿಫಲವಾಗುವುದೆಂಬ ಅನುಮಾನಗಳಿದ್ದವು. ಆದರೆ ಜನ ಅದನ್ನು ತಮ್ಮ ಸಾಮೂಹಿಕ ಯತ್ನದಿಂದ ಸುಳ್ಳಾಗಿಸಿದರು.
  • ನಮ್ಮದು ಮಹತ್ವಾಕಾಂಕ್ಷಿಗಳ ನೆಲ. ಸರ್ಕಾರದ ಕಾರ್ಯಕ್ರಮಗಳಲ್ಲಿ ಜನರೂ ಭಾಗವಹಿಸುವಿಕೆ ಬಯಸುತ್ತಾರೆ. ಇದನ್ನು ಎಲ್ಲ ಸರ್ಕಾರಗಳೂ ಅರ್ಥ ಮಾಡಿಕೊಳ್ಳಬೇಕು.
  • ಭಾರತ ಮೊದಲು ಎಂಬ ಮಂತ್ರವೇ ನಮ್ಮನ್ನು ಮುನ್ನೆಡಸಬೇಕಿದೆ.
  • ಭಾರತದಲ್ಲೇ ತಯಾರಿಸುವ ಮೂಲಕ ದೇಶವನ್ನು ಆತ್ಮನಿರ್ಭರವಾಗಿಸುವುದಕ್ಕೆ ಖಾಸಗಿ ಕಂಪನಿಗಳು ಮುಂದೆ ಬರಬೇಕು.
  • ಇವತ್ತು ಚಿಕ್ಕ ಮಗುವೂ ಆತ್ಮನಿರ್ಭರ ಭಾರತ ಎಂಬ ಘೋಷಣೆಯನ್ನು ಹೇಳುತ್ತಿದೆ.
  • ಆಟದ ಮೈದಾನದಿಂದ ಯುದ್ಧಭೂಮಿವರೆಗೆ ಮಹಿಳೆಯರು ಮುಂದೆ ಬಂದಿದ್ದಾರೆ. ಮುಂದಿನ 25 ವರ್ಷಗಳ ಭಾರತದ ಭವಿಷ್ಯ ರೂಪಿಸುವಲ್ಲಿ ಅವರ ಕೊಡುಗೆ ಗಮನಾರ್ಹವಾಗಲಿದೆ.
  • ಮಹಿಳೆಯರ ಘನತೆ ಕುಗ್ಗಿಸುವ ಏನನ್ನೂ ಮಾಡುವುದಿಲ್ಲ ಎಂಬ ಸಂಕಲ್ಪ ಎಲ್ಲರೂ ಮಾಡಬೇಕಿದೆ.
  • ಶಾಸ್ತ್ರಿಯವರ ಜೈ ಜವಾನ್-ಜೈ ಕಿಸಾನ್ ಜತೆ ವಾಜಪೇಯಿಯವರು ಜೈ ವಿಜ್ಞಾನ್ ಜೋಡಿಸಿದರು. ಇವತ್ತು ನಮ್ಮ ಯುವಜನ ಸಂಶೋಧನೆ ಮತ್ತು ಅಭಿವೃದ್ಧಿಗಳತ್ತ ಹೊರಳುತ್ತಿದ್ದಾರೆ. ಮುಂದಿನ ಆವಿಷ್ಕಾರಗಳು ಬರಲಿರುವುದು ಸಮುದ್ರದಾಳ ಮತ್ತು ಬಾಹ್ಯಾಕಾಶದಿಂದ. ಈ ನಿಟ್ಟಿನಲ್ಲಿ ನಮ್ಮ ಯುವಕರು ತಮ್ಮ ಪ್ರತಿಭೆ ತೋರುತ್ತಿದ್ದಾರೆ.

 

See also  ಮಂಗಳೂರು: ಆ.6 ಶನಿವಾರ ಅರೆಭಾಷೆ ಪದಕೋಶ ಬುಡುಗಡೆ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು