News Kannada
Thursday, March 23 2023

ಗೋವಾ

ಗೋವಾ: ಆಕಾಶವಾಣಿ, ದೂರದರ್ಶನ ಕೃಷಿ ಕಾರ್ಯಕ್ರಮ ಅಧಿಕಾರಿಗಳ ಕಾರ್ಯಾಗಾರ

Workshop of All India Radio, Doordarshan Agriculture Programme Officers
Photo Credit : News Kannada

ಗೋವಾ: ಗೋವಾದ ಕೇಂದ್ರೀಯ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಫೆ.8ರಿಂದ 10ರವರೆಗೆ  ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯಗಳ ಆಕಾಶವಾಣಿ ಮತ್ತು ದೂರದರ್ಶನ ಕೃಷಿ ಕಾರ್ಯಕ್ರಮ ಅಧಿಕಾರಿಗಳ ಕಾರ್ಯಾಗಾರವು ಜರುಗಿತು.

ಈ ಸಂದರ್ಭದಲ್ಲಿ ಮಡಿಕೇರಿ ಆಕಾಶವಾಣಿಯು ಪ್ರತೀ ದಿನ ಸಂಜೆ 6.50 ಕ್ಕೆ ಬಿತ್ತರಿಸುತ್ತಿರುವ ಕಿಸಾನ್ ವಾಣಿ ಕಾರ್ಯಕ್ರಮಗಳನ್ನು ಪರಿಚಯಿಸಿ,ಕೃಷಿಗೀತೆಗಳನ್ನು ಅಧರಿಸಿದ ಕೃಷಿ ಕಳಸ ಎಂಬುದನ್ನು ಕೇಳಿಸಲಾಯಿತು. ಇದು ದೆಹಲಿಯಿಂದ ಆಗಮಿಸಿದ್ದ ಆಕಾಶವಾಣಿಯ ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಹಿರಿಯ ಅಧಿಕಾರಿಗಳ ಮೆಚ್ಚುಗೆಯನ್ನು ಗಳಿಸಿತು.

ಮಡಿಕೇರಿ ಆಕಾಶವಾಣಿಯಲ್ಲಿ ಕೃಷಿ ಕುರಿತು ತಯಾರಿಸಿರುವ 50 ಕೃಷಿ ಗೀತೆಗಳ ಬಗ್ಗೆಯೂ ಉಲ್ಲೇಖ ಮಾಡಲಾಯಿತು. ಅಧಿಕಾರಿಗಳು ನಮ್ಮೆಲ್ಲರ ಈ ಪ್ರಯತ್ನವು ಉಪಯುಕ್ತವಾದುದು, ಪರಿಣಾಮಕಾರಿಯಾದುದು ಎಂದು ಒಕ್ಕೊರಳಿಂದ ಹೇಳಿದರು.ಹಾಡುಗಳ ಮೂಲಕ ಕೃಷಿ ಮಾಹಿತಿ ತಿಳಿಸುವುದು ಸೂಕ್ತ ಹಾಗೂ ಉಪಯುಕ್ತ ಎಂದವರು ಹೇಳಿದರು. ಮಡಿಕೇರಿ ಆಕಾಶವಾಣಿಯಿಂದ ಮಾಡುತ್ತಿರುವ ಕೃಷಿ ರಸ ಪ್ರಶ್ನೆಗಳ ನೇರ ಪ್ರಸಾರದ ಕೃಷಿ ಸಿರಿ, ನೇರ ಫೋನ್ ಇನ್, ಇತ್ಯಾದಿ ಕಾರ್ಯಕ್ರಮಗಳ ಬಗ್ಗೆಯೂ ಅಧಿಕಾರಿಗಳಿಗೆ ತಿಳಿಸಲಾಯಿತು.

ಕೃಷಿ ಕಾರ್ಯಕ್ರಮಗಳ ಪ್ರಸಾರ ಮುನ್ನ ಮೂಡಿಬರುವ ಕೋಟಿ ವಿದ್ಯೆಗಳಲ್ಲಿ ಕೃಷಿ ವಿದ್ಯೆಯೇ ಮೇಲು, ಕೃಷಿತೋ ನಾಸ್ತಿ ದುರ್ಭಿಕ್ಷ ಎಂಬ ವಾಕ್ಯಗಳೊಂದಿಗೆ ಕಾಣಿಸುವ ಸಂಗೀತವೂ ಅಧಿಕಾರಿಗಳಿಗೆ ಇಷ್ಟವಾಯಿತು

See also  ಪಣಜಿ: ಕಡಲ್ಕೊರೆತ, ಮೈಕ್ರೋ ಪ್ಲಾಸ್ಟಿಕ್ ಪಿಡುಗನ್ನು ಎದುರಿಸಲು ಐಐಟಿ-ಗೋವಾಕ್ಕೆ ಸಿಎಂ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು