News Kannada
Sunday, April 02 2023

ಮಹಾರಾಷ್ಟ್ರ

ಲೈಂಗಿಕ ಕಿರುಕುಳದ ಸುಳ್ಳು ದೂರು ದಾಖಲಿಸಿದ್ದ ಅಪ್ರಾಪ್ತೆ; ಪ್ರಕರಣದಿಂದ ಮಲತಂದೆಯನ್ನು ಖುಲಾಸೆಗೊಳಿಸಿದ ಕೋರ್ಟ್

Hassan: 'Legal awareness among public will help to have peace in society'
Photo Credit : IANS

ಮಹಾರಾಷ್ಟ್ರ : ಅಪ್ರಾಪ್ತೆಯೊಬ್ಬಳ ಮೇಲೆ ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಆಕೆಯ ಮಲತಂದೆಯನ್ನು ಬಂಧಿಸಿದ್ದ ಕೋರ್ಟ್, ಇತ್ತೀಚಿಗೆ ಆತನನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಕಾರಣ ಇಷ್ಟೇ, ತನ್ನ ಮಲತಂದೆಯ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಸುಳ್ಳು ದೂರು ದಾಖಲಿಸಿದ್ದೇನೆಂದು ಹುಡುಗಿ‌ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾಳೆ.

ಕಳೆದ ನಾಲ್ಕು ತಿಂಗಳಿಂದ ಜೈಲು ವಾಸದಲ್ಲಿದ್ದ ಪಾಪದ ತಂದೆಯನ್ನು ಈಗ ಬಿಡುಗಡೆ ಮಾಡಿ, ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.

ಮಹಾರಾಷ್ಟ್ರದ ಕೊಂಡಿವಲಿ ಪೊಲೀಸ್ ಠಾಣೆಯಲ್ಲಿ 16 ವರ್ಷದ ಹುಡುಗಿಯೊಬ್ಬಳು 2018ರಲ್ಲಿ ತನ್ನ ಮಲತಂದೆಯ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಳು. ತನ್ನ ಪ್ರೇಮಿ ಹಾಗೂ ಜನಗಳ ಎದುರು ತನಗೆ ಅವಮಾನ ಮಾಡಿದ ಮಲತಂದೆಯ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಹುಡುಗಿ ಈ ಸುಳ್ಳು ದೂರು ನೀಡಿದ್ದಳೆಂದು ವರದಿಯಾಗಿದೆ. ಅಂದಿನಿಂದ ಪ್ರಕರಣದ ಟ್ರಯಲ್ಸ್ ನಡೆದು ನಾಲ್ಕು ತಿಂಗಳ ಹಿಂದೆ ಮಲತಂದೆಯನ್ನು ಬಂಧಿಸುವಂತೆ ಕೋರ್ಟ್ ಆದೇಶಿಸಿತ್ತು.

ಮಲತಂದೆಯ ವಿರುದ್ಧ ದ್ವೇಷದ ಕಾವಿನಲ್ಲಿ ಬೇಯುತ್ತಿದ್ದ ಹದಿನಾರು ವರ್ಷದ ಹುಡುಗಿ, ತನ್ನ ತಾಯಿಯ ಬಳಿ ಹೋಗಿ ಆತ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆಂದು ಹೇಳಿಕೊಂಡಿದ್ದಾಳೆ. ಹುಡುಗಿಯ ಮಾತುಗಳನ್ನು ನಂಬಿದ ತಾಯಿ ತನ್ನ ಪಕ್ಕದ ಮನೆಯವರ ಸಹಾಯದಿಂದ ಕೊಂಡಿವಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡ‌ ಪೊಲೀಸರು ತಕ್ಷಣ ತಂದೆಯನ್ನು ಬಂಧಿಸಿದ್ದಾರೆ.

ಆದರೆ ಆನಂತರ ಸತ್ಯ ತಿಳಿದ ಹುಡುಗಿಯ ತಾಯಿ, ಪೊಲೀಸ್ ಠಾಣೆಗೆ ಬಂದು ನಿಜಾಂಶ ತಿಳಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನೂ ಎನ್ನುವುದನ್ನ ನೋಡುವುದಾದರೆ ಆಕೆಯ ತಾಯಿಯ ಹೇಳಿಕೆಯ ಪ್ರಕಾರ, ಹುಡುಗಿ ಅದೇ ಏರಿಯಾದಲ್ಲಿದ್ದ 20 ವರ್ಷದ ಹುಡುಗನನ್ನು ಪ್ರೀತಿಸಿದ್ದಳು, ಅವನನ್ನೇ ಮದುವೆಯಾಗಬೇಕೆಂಬ ಕನಸು ಕಂಡಿದ್ದಳು. ಆದರೆ ಆತ ಗಾಂಜಾ ಹಾಗೂ ಡ್ರಗ್ಸ್ ವ್ಯಸನಿಯಾಗಿದ್ದ. ಆಕೆಯ ತಂದೆಗೆ ಹುಡುಗನ ಬಗ್ಗೆ ತಿಳಿದಿತ್ತು ಹಾಗೂ ಆತ ಅವರ ಪ್ರೀತಿಯನ್ನು ಒಪ್ಪಿರಲಿಲ್ಲ. ಹೀಗೆ ಒಂದು ದಿನ ಅವರಿಬ್ಬರು ಕೈಕೈ ಹಿಡಿದು ಸುತ್ತುತ್ತಿರುವುದನ್ನು ಕಂಡಿದ್ದಾರೆ. ಅದೇ ಸ್ಥಳದಲ್ಲಿ ಜನರ ಮುಂದೆ ಇಬ್ಬರಿಗೂ ಛೀಮಾರಿ ಹಾಕಿದ್ದಾರೆ, ಈ ಘಟನೆಗೆ ದ್ವೇಷ ತೀರಿಸಿಕೊಳ್ಳಲು ಹುಡುಗಿ ಈ ಸುಳ್ಳು ದೂರು ನೀಡಿದ್ದಾಳೆಂದು ತಿಳಿಸಿದ್ದಾರೆ. ಪೊಲೀಸರು ಈ ಸಂಬಂಧ ಆ ಹುಡುಗಿಯ ಪ್ರೇಮಿಯ ಹೇಳಿಕೆಯನ್ನು ಪಡೆದಿದ್ದಾರೆ. ಆತನೂ ಇದೇ ವಿಷಯ ಬಾಯ್ಬಿಟ್ಟಿದ್ದಾನೆ.

ಆರು ತಿಂಗಳ ಕಾಲ ಬಾಲಾಪರಾಧಿ ಕೇಂದ್ರದಲ್ಲಿದ್ದ ಹುಡುಗಿಗೆ ತನ್ನ ಪೋಷಕರ ನೆನಪುಗಳು ಕಾಡಲು ಶುರುವಾಯಿತು. ಆನಂತರ ತಾನು ಮಾಡಿದ ಕೃತ್ಯದ ಬಗ್ಗೆ ಅರಿವಾಗಿ, ತಾನು ಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟು ಕೊನೆಗೆ ತನ್ನ ಹೇಳಿಕೆಯನ್ನು ಹಿಂಪಡೆದಿದ್ದಾಳೆ. ಇಷ್ಟೆಲ್ಲಾ ಆದರೂ ಆಕೆಯ ಮಲತಂದೆ ಅವಳನ್ನ ಮನೆಗೆ ಸಂತೋಷದಿಂದಲೇ ಮತ್ತೆ ಬರಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲಾ ಇದೇ ತಿಂಗಳಲ್ಲಿ ಆಕೆಯ ಮದುವೆಯನ್ನು ನಿಶ್ಚಯಿಸಿದ್ದಾರೆ.

See also  ಮಹಾರಾಷ್ಟ್ರ: ಒಮಿಕ್ರಾನ್ ಪ್ರಕರಣದ ರೋಗಿಯ ಪರೀಕ್ಷೆ ನೆಗೆಟಿವ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು